Connect with us

Hi, what are you looking for?

Diksoochi News

Uncategorized

ದನದ ಬಾಯಲ್ಲಿ ಕೈಬಾಂಬ್ ಸ್ಪೋಟ; ಬಾಯಿ ಛಿದ್ರ

0

ಕಾರವಾರ : ಮೇಯುತ್ತಿದ್ದ ವೇಳೆ ಕೈಬಾಂಬ್ ಸ್ಪೋಟಗೊಂಡು ದನದ ಬಾಯಿ ಛಿದ್ರಗೊಂಡ ಘಟನೆ ಮುಂಡಗೋಡದಲ್ಲಿ ನಡೆದಿದೆ. ಪರಿಣಾಮ ಆಕಳಿನ ಬಾಯಿ ಸಂಪೂರ್ಣ ಛಿದ್ರಗೊಂಡಿದೆ.
ಸನವಳ್ಳಿ ಜಲಾವಶದ ಬಳಿ ಕಾಡುಪ್ರಾಣಿ ಭೇಟೆಗೆಂದು ಕೈಬಾಂಬ್ ಇಡಲಾಗಿತ್ತು. ಅಪ್ಪು ನಾರಾಯಣಸ್ವಾಮಿ ನಾಯರ ಎಂಬವರಿಗೆ ಸೇರಿದ ಆಕಳು, ನೆಲದಲ್ಲಿ ಬಿದ್ದಿದ್ದ ಕೈಬಾಂಬ್ ನ್ನು ಆಹಾರವೆಂದು ತಿನ್ನಲು ಮುಂದಾಗಿದೆ. ಈ ವೇಳೆ ಬಾಂಬ್ ಸ್ಪೋಟಗೊಂಡಿದೆ. ಬಾಯಿ, ನಾಲಿಗೆ ಕಳೆದುಕೊಂಡಿರುವ ದನ ಚಿಂತಾಜನಕವಾಗಿದೆ. ಸಮೀಪದಲ್ಲೇ ಮಹಿಳೆಯರು ಕಟ್ಟಿಗೆಗೆ ತೆರಳಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ಘಟನೆ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜೀವಂತ ಕೈಬಾಂಬ್ ಪತ್ತೆ ಹಚ್ಚಿದ್ದಾರೆ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ, ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!