ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದುವೆ ವಿಚಾರವಾಗಿ ನೊಂದುಕೊಂಡಿದ್ದ ಚೈತ್ರಾ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೆ ಚೈತ್ರಾ ಮದುವೆ ವಿಚಾರದಲ್ಲಿ ಸುದ್ದಿಯಲ್ಲಿದ್ದರು. ಮಾರ್ಚ್ 28 ರಂದು ಉದ್ಯಮಿ ನಾಗಾರ್ಜುನ ಎಂಬವರ ಜೊತೆ ಮದುವೆಯಾಗಿದ್ದರು. ಸಂಜೆ ವೇಳೆ ಠಾಣೆಯ ಮೆಟ್ಟಿಲೇರಿತ್ತು ಜೋಡಿ. ಬಲವಂತವಾಗಿ ವಿವಾಹ ಮಾಡಲಾಗಿದೆ ಎಂದು ನಾಗಾರ್ಜುನ್ ದೂರಿದ್ದರು. ಆದರೆ, ಚೈತ್ರಾ ಇನ್ನು ಒಪ್ಪಿರಲಿಲ್ಲ.

ಬಿಗ್ ಬಾಗ್ ಸೀಸನ್ 7 ರಲ್ಲಿ ಭಾಗವಹಿಸಿದ್ದ ಚೈತ್ರಾ ಸಿನಿಮಾ, ಧಾರಾವಾಹಿ, ಆಲ್ಬಂ ಸಾಂಗ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆ, ಚಿತ್ರಕಥೆ ಬರೆಯುವ ಮೂಲಕಾನೂ ಗಮನ ಸೆಳೆದಿದ್ದಾರೆ.


In this article:chaithra kotooru, Diksoochi news, diksoochi Tv, diksoochi udupi, sucide attempt

Click to comment