ಕಾಪು: ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನೂತನ ಸಂಘಟನೆ ಅವಿರತ ಕೆಲಸ ಮಾಡುವ ನಿಟ್ಟಿನಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕಲಾವಿದರಿಗೆ ಸನ್ಮಾನ, ಅಶಕ್ತ ಹಾಗೂ ಕಷ್ಟದಲ್ಲಿರುವ ಕಲಾವಿದರಿಗೆ ನೆರವು ನೀಡುವ ಯೋಜನೆಗೆ ಸ್ಥಾಪನೆಯಾದ “ಯಕ್ಷ ಪ್ರಿಯರು” ಕಾಪು ಇದರ ಅಧ್ಯಕ್ಷರಾಗಿ ಸಮಾಜರತ್ನ ಲೀಲಾಧರ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯಧ್ಯಕ್ಷ ಅರುಣ್ ಶೆಟ್ಟಿ ಪಾದೂರು,
ಸಂಸ್ಥೆಯ ಗೌರವಧ್ಯಕ್ಷರಾಗಿ ಗುರ್ಮೆ ಸುರೇಶ್ ಶೆಟ್ಟಿ, ಬೈರುಗುತ್ತು ರಮೇಶ್ ಶೆಟ್ಟಿ,ನಡಿಕೆರೆ ರತ್ನಾಕರ ಶೆಟ್ಟಿ, ಪ್ರಭಾಕರಪೂಜಾರಿ ಕಾಪು, ಸಂಚಾಲಕರಾಗಿ ಶ್ರೀಕರ ಶೆಟ್ಟಿ ಕಲ್ಯಾ,
ಪ್ರದಾನ ಕಾರ್ಯದರ್ಶಿ ರಾಕೇಶ್ ಕುಂಜೂರು, ಜೊತೆ ಕಾರ್ಯದರ್ಶಿ ಪ್ರಭಾತ್ ಶೆಟ್ಟಿ, ಉಮೆಶ್ ಕರ್ಕೇರಾ ಮಲ್ಲಾರು, ಕೋಶಾಧಿಕಾರಿ ಸಂತೋಷ ಆರ್ ಶೆಟ್ಟಿ ಕಳತ್ತೂರು, ಜೊತೆ ಕೋಶಾಧಿಕಾರಿ ಉಮೇಶ್ ಶೆಟ್ಟಿ ಡಾಲಿ,ಕಾಪು ಹರೀಶ್ ನಾಯಕ್,ಸಹ ಸಂಚಾಲಕರಾಗಿ ರಘರಾಮ ಶೆಟ್ಟಿ ಕೊಪ್ಪಲಂಗಡಿ , ನಾಗಭೂಷಣ್ ರಾವ್,ಮಾಧ್ಯಮ ನಿರ್ವಹಣೆ ಹಾಗೂ ಸಂಚಾಲಕರಾಗಿ ಪುರುಷೋತ್ತಮ ಸಾಲಿಯಾನ್, ಮತ್ತು ಕಾರ್ಯಕಾರಿ ಸಮಿತಿ ಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.