ಬೆಂಗಳೂರು : ರಾಜ್ಯದ ಹಲೆವೆಡೆ ಇಂದು ಮತ್ತು ನಾಳೆ ಎರಡು ದಿನ ಮಳೆಯಾಗಲಿದ್ದು ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ. ಕರಾವಳಿ, ಶಿವಮೊಗ್ಗ, ಮೈಸೂರು,ಕೊಡಗು, ಚಿಕ್ಕಮಗಳೂರು, ಹಾಸನ, ಬಳ್ಳಾರಿ, ಚಾಮರಾಜನಗರದಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ವರದಿ ನೀಡಿದೆ.
ರಾಜ್ಯದ ವಿವಿಧೆಡೆ ಬುಧವಾರ ರಾತ್ರಿ ಸಿಡಿಲು ಮಳೆಯಾಗಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಈರಪ್ಪ, ಚಿಕ್ಕಬಳ್ಳಾಪುರ ನಾಗಮ್ಮ, ವಿಜಯಗರ ಜಿಲ್ಲೆಯ ನಿಂಗರಾಜ, ಹರಪನಹಳ್ಳಿಯ ಬಸವರಾಜು ಸಿಡಿಲು ಬಡಿದು ಮೃತಪಟ್ಟಿದ್ದಾರೆ.