ಶಿವಮೊಗ್ಗ: ಕೊರೋನಾ ಹಾವಳಿ ಹೆಚ್ಚಾಗಿರುವ ಕಾರಣ ರಾಜ್ಯ ಸರ್ಕಾರ ಬಿಗಿ ಕ್ರಮ ಕೈಗೊಂಡಿದೆ. ಏಪ್ರಿಲ್ 27 ರಿಂದ ಆರಂಭಿಸಿ ಮೇ 12 ರ ವರೆಗೆ ಲಾಕ್ ಡೌನ್ ಘೋಷಿಸಿದೆ. ಹಾಗಾಗಿ ಇಡೀ ಕರ್ನಾಟಕವೇ ಸ್ತಬ್ಧವಾಗುತ್ತಿದೆ. ಶಿವಮೊಗ್ಗದಲ್ಲೂ ಕೆಲಸಗಳಿಗೆ ಹೋಗುವವರನ್ನು ಹೊರತು ಪಡಿಸಿ ಮತ್ತೆಲ್ಲರೂ ಹೊರಗೆ ಬರುತ್ತಿಲ್ಲ.
ಬೆಳಿಗ್ಗೆ 6 ಗಂಟೆ ಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಯಲ್ಲಿ ಜನ ತೊಡಗಿಕೊಂಡರು. ಎಪಿಎಂಸಿ ಯಾರ್ಡ್ ಕೂಡ 10 ಗಂಟೆಯ ವರೆಗೆ ತೆರೆದಿತ್ತು. ಅಂಗಡಿ ಮುಂಗಟ್ಟುಗಳೆಲ್ಲವೂ ಮುಚ್ಚಲ್ಪಟ್ಟಿವೆ. ತುರ್ತು ಸೇವೆಗಳು ಎಂದಿನಂತೆ ಇವೆ. ನಿಯಮ ಉಲ್ಲಂಘನೆಯಾಗದಂತೆ ಪೊಲೀಸರು ಕಣ್ಗಾವಲು ಇರಿಸಿದ್ದಾರೆ.