Connect with us

Hi, what are you looking for?

Diksoochi News

Uncategorized

ಹೆಬ್ರಿ : ಅನಗತ್ಯ ತಿರುಗುತ್ತಿದ್ದವರಿಗೆ ಖಾಕಿ ಖಡಕ್ ವಾರ್ನಿಂಗ್; ಕೇಸು ದಾಖಲು

0

ಹೆಬ್ರಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನಗಳ ಸಂಚಾರಕ್ಕೆ ಅನುಮತಿ ಇಲ್ಲ. ಆದರೂ ಕೆಲವರು ಹತ್ತು ಗಂಟೆ ನಂತರ ಹೆಬ್ರಿ ಪೇಟೆಯಲ್ಲಿ ಅನಗತ್ಯವಾಗಿ ದ್ವಿಚಕ್ರ ಹಾಗೂ ಕಾರಿನಲ್ಲಿ ತಿರುಗಾಡುತ್ತಿದ್ದರು. ಈ ವೇಳೆ ಹೆಬ್ರಿ ಪೊಲೀಸರು ತಡೆದು ಖಡಕ್ ವಾರ್ನಿಂಗ್ ನೀಡಿದ್ದಾರೆ ಮತ್ತು ಕೆಲವರ ಮೇಲೆ ಕೇಸು ದಾಖಲಿಸಿದ್ದಾರೆ .ಎಮರ್ಜನ್ಸಿ ಅಥವಾ ಬ್ಯಾಂಕಿಗೆ, ಮೆಡಿಕಲ್ ಹೋಗೋರಿಗೆ ಅನುಮತಿ ನೀಡಲಾಯಿತು.

ಜನರು ಸುಮ್ಮನೆ ಬ್ಯಾಂಕಿನ ನೆಪ ಹೇಳಿ ತಿರುಗಾಡುತ್ತಿದ್ದು, ನಾಳೆಯಿಂದ ಬೇಗ ಬ್ಯಾಂಕ್ ವ್ಯವಹಾರ ಮುಗಿಸಿ ಮನೆಗೆ ಹೋಗಬೇಕು ಎಂದು ಜನರಿಗೆ ಹೆಬ್ರಿ ಪ್ರಭಾರ ಪೊಲೀಸ್ ಠಾಣಾಧಿಕಾರಿ ಶುಭಕರ ಇವರು ವಾರ್ನಿಂಗ್ ಮಾಡಿದರು.

ಉಪಠಾಣಾಧಿಕಾರಿ ಗಣೇಶ್ ಸಿಬ್ಬಂದಿಗಳಾದ ದಿನೇಶ್ ಹಾಗೂ ಸಂತೋಷ್ ಮತ್ತಿತರರು ಕಾರ್ಯಾಚರಣೆಯಲ್ಲಿದ್ದರು.

ವರದಿ : ಶ್ರೀದತ್ತ, ಹೆಬ್ರಿ

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!