ವರದಿ: ಶಫೀ ಉಚ್ಚಿಲ
ಕಾಪು : ಕೊವಿಡ್ 19 ಲಾಕ್ಡೌನ್ನಿಂದಾಗಿ ವಾಹನ ಚಾಲಕರು ಆಹಾರ ಸಿಗದೆ ಪರಿತಪಿಸುವಂತಾಗಿದ್ದು,
ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು-ಉಡುಪಿ ರಸ್ತೆಯಲ್ಲಿ ಬಹುತೇಕ ಹೊಟೇಲುಗಳು ಬಾಗಿಲು ಮುಚ್ಚಿದೆ. ಈ ಸಮಸ್ಯೆಯನ್ನು ಮನಗಂಡ ಉಚ್ಚಿಲದ ಪೇಟೆ ಭಾಗದಲ್ಲಿರುವ ಬ್ಲೂ ವೇವ್ಸ್ ಕಟ್ಟಡದಲ್ಲಿರುವ ನಿಸಾರ್ ಮುಲ್ಕಿ ಇವರ ನೇತ್ರತ್ವದ ಯುವಕರ ತಂಡ ಹಾಗು ದಾನಿಗಳ ಸಹಕಾರದಿಂದ ಕಳೆದ ಮೂರು ದಿನಗಳಿಂದ ಪ್ರತಿದಿನ ಈ ಮಾರ್ಗವಾಗಿ ಸಂಚರಿಸುವ ವಾಹನ ಚಾಲಕರಿಗೆ ಉಚಿತ ಊಟದ ವ್ಯವಸ್ಥೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಈ ತಂಡ ಉಚ್ಚಿಲ ಪೇಟೆಯಲ್ಲಿ ಪ್ರತೀ ದಿನ ಸಾಯಂಕಾಲ 5:00 ಗಂಟೆಯ ಬಳಿಕ ಅನ್ನ-ನೀರಿಲ್ಲದೇ ಸಂಚರಿಸುವ ಸರಕು ಸಾಗಣೆ ವಾಹನಗಳ ಚಾಲಕರಿಗೆ, ನಿರ್ವಾಹಕರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದಾರೆ.ಆಹಾರ, ನೀರು ಪಡೆದುಕೊಂಡ ಚಾಲಕರು ತಮಗೆ ಊಟ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿ ಹೊರಡುತ್ತಿದ್ದಾರೆ.

ತಂಡದಲ್ಲಿ ನಿಸಾರ್ ಮುಲ್ಕಿ, ಶೇಖ್ ಅಹ್ಮದ್ ಹೆಜಮಾಡಿ,ರಝಾಕ್ ಕರೀಂ, ಆಸೀಫ್ ಹನ್ನಾನ್,ಆಸೀಫ್ ವೈಸಿ.ಮಾವೀಝ್ ಇಬ್ರಾಹಿಂ,ರಫೀಕ್ ತೀರ್ಥಹಳ್ಳಿ, ಅನ್ವರ್ ಕೋಟೇಶ್ವರ,ಹನೀಫ್ ಪಡುಬಿದ್ರಿ,ರಝಾಕ್ ಮುಡಿಪು , ಜಲಾಲುದ್ದೀನ್, ಹಮ್ಮದ್ ಮೌದಿನ್ ಹಾಗೂ ಶಂಶುದ್ದೀನ್,ಇಬ್ರಾಹಿಂ ಉಪಸ್ಥಿತರಿದ್ದರು.
