ವರದಿ: ಶಫೀ ಉಚ್ಚಿಲ
ಕಾಪು: ಬಡ ಕುಟುಂಬದ ಹಸಿವು ನೀಗಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿದ ಕಾಪು ಪೋಲಿಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಮಾದರಿಯಾಗಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸುಧಾಕರ್ ತನ್ನ ಹುಟ್ಟು ಹಬ್ಬವನ್ನು ತನ್ನ ಬೀಟ್ ವ್ಯಾಪ್ತಿಯ ಬಡ ಕುಟುಂಬಕ್ಕೆ ದಿನ ಬಳಕೆಯ ಆಹಾರ ಸಾಮಗ್ರಿ ಹಾಗೂ ಬಟ್ಟೆಬರೆಗಳನ್ನು ನೀಡುವ ಮೂಲಕ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಸುಧಾಕರ್ ಅವರು ಓರ್ವ ನಿಷ್ಠಾವಂತ ಪೊಲೀಸ್ ಸಿಬ್ಬಂದಿಯಾಗಿದ್ದು, ಈಗಾಗಲೇ ತನ್ನ ಕರ್ತವ್ಯ ನಿಷ್ಠೆಗೆ ಬಹುಮಾನದ ಮೆಚ್ಚುಗೆಯನ್ನು ಪಡೆದಿದ್ದಾರೆ.ಇದೀಗ ಅವರ ವಿಶೇಷವಾದ ಹುಟ್ಟುಹಬ್ಬ ಆಚರಣೆಗೆ ಸಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರ ಮೆಚ್ಚುಗೆ ಪಡೆದಿದ್ದಾರೆ.
Advertisement. Scroll to continue reading.



