ಕೋರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಐಪಿಎಲ್ ರದ್ದಾಗಿದೆ. ಬಿಸಿಸಿಐ ಇಂತಹ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ ಆಟಗಾರರಿಗೆ ಸೋಂಕು ಕಾಡುತ್ತಿದೆ.
ಹೈದರಾಬಾದ್ ತಂಡದ ವೃದ್ಧಿ ಸಹಾ, ಕೆಕೆಆರ್ ನ ಸಂದೀಪ್ ವಾರಿಯಾರ್, ವರುಣ್ ಚಕ್ರವರ್ತಿ ಡೆಲ್ಲಿ ಕ್ಯಾಪಿಟಲ್ಸ್ ನ ಅಮಿತ್ ಮಿಶ್ರಾ, ಸಿಎಸ್ ಕೆ ಬೌಲಿಂಗ್ ಕೋಚ್ ಬಾಲಾಜಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಆಟಗಾರರಲ್ಲಿ ಕೋರೋನಾ ಸೋಂಕು ಹೆಚ್ಚಾಗುವ ಭಯವಿದ್ದು ನಿನ್ನೆ(ಮಂಗಳವಾರ) ನಡೆಯಬೇಕಿದ್ದ ಆರ್ ಸಿ ಬಿ ಹಾಗೂ ಕೆಕೆಆರ್ ನಡುವೆ ನಡೆಯಬೇಕಿದ್ದ ಪಂದ್ಯವನ್ನು ಮುಂದೂಡಲಾಗಿತ್ತು. ಆದರೆ, ಇದೀಗ ಐಪಿಎಲ್ ಪಂದ್ಯಾವಳಿಯನ್ನೇ ರದ್ದು ಮಾಡಲಾಗಿದೆ.
Advertisement. Scroll to continue reading.