Connect with us

Hi, what are you looking for?

Diksoochi News

Uncategorized

ಕಾಪು: ಸಮಾಜ ಸೇವಾ ವೇದಿಕೆಯ ಆಶ್ರಯದಲ್ಲಿ ದಾನಿಗಳಿಂದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

0

ವರದಿ: ಶಫೀ ಉಚ್ಚಿಲ

ಕಾಪು : ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ಇದರ ಆಶ್ರಯದಲ್ಲಿ ದಾನಿಗಳಾದ ವೇದಿಕೆಯ ಕೋಶಾಧಿಕಾರಿ ಸಾಹಿಲ್ ಫೇಬ್ರಿಕೇಶನ್ ಮಾಲಕ ಮೊಹಮ್ಮದ್ ಸಾದಿಕ್
ಕಾಪು ಇವರಿಂದ ಕಾಪು ಪರಿಸರದ ವಸತಿ ರಹಿತ ನಿರ್ಗತಿಕರಿಗೆ ಹಾಗೂ ಬಡ ಕುಟುಂಬಗಳಿಗೆ
ಕಳೆದ 10 ದಿನಗಳಿಂದ ಬಿಸಿ ಊಟ ಹಾಗು ಪಾನೀಯ ಕಿಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತಮಾಡಿದ ಫಾರೂಕು ಚಂದ್ರನಗರ, ನಮ್ಮಲ್ಲಿ ಇದ್ದದ್ದನ್ನು ಅರ್ಹರಿಗೆ ಹಂಚಿ ತಿನ್ನುವುದು ನಮ್ಮ ಕರ್ತವ್ಯ. ಸೃಷ್ಟಿಕರ್ತನು ಎಲ್ಲರಿಗೂ ಒಳ್ಳೇದು ಮಾಡಲಿ ಕೊರೋನ ರೋಗದ ಬಗ್ಗೆ ಭಯಪಡದೆ ಸರಕಾರದ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ ಎಂದು ಜಾಗೃತಿ ಮೂಡಿಸಿದರು.

ಕಳೆದ ವರ್ಷ ಕೂಡ ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಸಮಾಜ ಸೇವಾ ವೇದಿಕೆಯು, ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರ ನೇತೃತ್ವದಲ್ಲಿ ಸುಮಾರು 3000 ಕ್ಕೂ ಅಧಿಕ ಮನೆಗಳಿಗೆ ದಿನ ಬಳಕೆ ಆಹಾರ ಸಾಮಾಗ್ರಿಗಳನ್ನು ನೀಡಿ ಬಡ ಕುಟುಂಬಗಳ ಹಸಿವು ನೀಗಿಸಿರುವುದು ಇಲ್ಲಿ ಸ್ಮರಿಸಬಹುದು.

ಈ ಸಂದರ್ಭದಲ್ಲಿ ಜೆ ಡಿ ಎಸ್ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೀಶ್ ಶೆಟ್ಟಿ ,ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಶರ್ಫುದ್ದಿನ್ ಶೇಖ್ ಮಜೂರು, ವೇದಿಕೆ ಗೌರಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ಗೌರವ ಸಲಹೆಗರಾರದ ದಯಾನಂದ ಕೆ ಶೆಟ್ಟಿ ದೆಂದೂರು, ಪ್ರ.ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಕಾರ್ಯದರ್ಶಿ ಶಂಶುದ್ದೀನ್ ಕರಂದಾಡಿ, ಸಿ.ಆರ್ ಪ್ರಾಪರ್ಟಿಸ್ ಮಾಲಕರಾದ ಸಂತೋಷ್ ಆಚಾರ್ಯ ಶಿರ್ವ, ಸುಹೈಲ್ ಕಾಪು, ಸೈಫ್ ಕಾಪು ಹಾಗು ರಶೀದ್ ಕಾಪು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!