Connect with us

Hi, what are you looking for?

Diksoochi News

Uncategorized

ಬಹ್ರೇನ್ ನಿಂದ ಮಂಗಳೂರಿಗೆ ಹಡಗಿನ ಮೂಲಕ 40 ಮೆಟ್ರಿಕ್ ಟನ್ ಆಕ್ಸಿಜನ್

0

ಮಂಗಳೂರು : ದೇಶದಲ್ಲಿ ಕೊರೋನ ಹಾವಳಿ ಹಚ್ಚಾಗಿದೆ. ಮತ್ತೊಂದೆಡೆ ಅಮ್ಲಜನಕದ ಕೊರತೆ ಕಾಡುತ್ತಿದೆ. ಈ ನಡುವೆ ವಿವಧ ರಾಷ್ಟ್ರಗಳು ಭಾರತಕ್ಕೆ ಸಹಾಯಹಸ್ತ ಚಾಚಿವೆ. ಬಹ್ರೆನ್ ದೇಶದಿಂದ ಮಂಗಳೂರಿಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಹಡಗಿನ ಮೂಲಕ ಬಂದಿದೆ. ಬಹ್ರೇನ್ ಮತ್ತು ಭಾರತ ಸರ್ಕಾರದ ಒಪ್ಪಂದದಂತೆ 20 ಮೆಟ್ರಿಕ್ ಟನ್ ನ ಎರಡು ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್ ಗಳು ಮಂಗಳೂರಿಗೆ ಬಂದಿದೆ. ನವಮಂಗಳೂರು ಬಂದರಿನ ಬೇರೆ ಎಲ್ಲಾ ಶಿಫ್ಟಿಂಗ್ ಕಾರ್ಯಗಳನ್ನು ಸ್ಥಗಿಸಿಗೊಳಿಸಿ, ಕ್ರೇನ್ ಮೂಲಕ ಟ್ಯಾಂಕರ್ ಗಳನ್ನು ಕೆಳಗಿಳಿಸಲಾಯಿತು. ಇವತ್ತು ಇಡೀ ದಿನ ಎನ್ ಎಂ ಪಿ ಟಿ ಬಳಿ ಸಮುದ್ರದಲ್ಲಿ ಹಡಗುಗಳು ಸಂಚರಿಸದಂತೆ ಹಿಡಿದಿದ್ದು, ಬಹ್ರೇನ್ ನ ಮನಾಮಾ ಬಂದರಿನಿಂದ ನೌಕೆ ಹೊರಟಿದ್ದು, ನೌಕೆಯಲ್ಲಿ ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟ ಇತರೆ ವೈದ್ಯಕೀಯ ಉಪಕರಣಗಳೂ ಇದ್ದವು.

ಸ್ವಾಗತಿಸಿದ ಸಚಿವರು, ಶಾಸಕರು

ನವ ಮಂಗಳೂರು ಬಂದರಿಗೆ ಬಹರೈನ್ ನಿಂದ ಆಕ್ಸಿಜನ್ ಹೊತ್ತು ಆಗಮಿಸಿದ INS Talwar ಅನ್ನು ಭಾರತೀಯ ಜನತಾ ಪಾರ್ಟಿಯ ರಾಜ್ಯ ಅಧ್ಯಕ್ಷರು, ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಬರಮಾಡಿಕೊಳ್ಳಲಾಯಿತು.

Advertisement. Scroll to continue reading.

ಈ ವೇಳೆ ಶಾಸಕರಾದ ಡಾ. ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಶ್ರೀ ಪ್ರೇಮಾನಂದ ಶೆಟ್ಟಿ, ಶ್ರೀ ನಿತಿನ್ ಕುಮಾರ್, NMPT ಅಧ್ಯಕ್ಷರು, ಜಿಲ್ಲಾಧಿಕಾರಿಯವರು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯವರು, ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲ ಅಧ್ಯಕ್ಷರಾದ ವಿಜಯ್ ಕುಮಾರ್ ಶೆಟ್ಟಿ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!