ಉತ್ತರಪ್ರದೇಶ: ಬಾವಿ ಪತಿಯೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ಯುವತಿಯ ಮೇಲೆ ಮೂವರು ಯುವಕರು ಸಾಮೂಹಿಕವಾಗಿ ಅತ್ಯಾಚಾರಗೈದಿರುವ ಘಟನೆ ಸೋನಭದ್ರ ಜಿಲ್ಲೆಯಲ್ಲಿ ನಡೆದಿದೆ. ಶನಿವಾರ ಮಧ್ಯಾಹ್ನ 20 ವರ್ಷದ ಯುವತಿಯು ತನ್ನ ಬಾವಿ ಪತಿಯೊಂದಿಗೆ ಧರ್ತಿದಂಡ್ ಕಾಡಿನ ಮೊಟ್ಕಿ ಹಿಲ್ ನ ದೇವಸ್ಥಾನಕ್ಕೆ ತೆರಳಿದ್ದಳು. ಈ ವೇಳೆ ಕಾಡಿನಲ್ಲಿ ಮರ ಕಡಿಯಲು ಆಗಮಿಸಿದ್ದ ಮೂವರು ಯುವಕರು ಇಬ್ಬರನ್ನು ಹಿಡಿದಿದ್ದಾರೆ. ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಪನಿಕಾ ಗ್ರಾಮದ ಶ್ಯಾಮ್ ಲಾಲ್, ಮುನಿಲಾಲ್ ಮತ್ತು ಧರ್ತಿದಡ್ ನ ಅಂಗದ್ ಕೇವತ್ ಬಂಧಿತರು.