ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ನಾಳೆಯಿಂದ ಕುಂದಾಪುರದವರಿಗೆ ಮಾತ್ರ ಪುರಸಭೆ ವ್ಯಾಪ್ತಿಯವರೆಗೆ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ. ಕೋಟೇಶ್ವರ, ತಲ್ಲೂರು ಹಾಗೂ ಹತ್ತಿರದ ಗ್ರಾಮದ ಸಾರ್ವಜನಿಕರು ಬೈಕ್ ಮತ್ತು ಇತರ ವಾಹನಗಳ ಮೂಲಕ ಕುಂದಾಪುರ ಪೇಟೆಗೆ ಬಂದು ಸಾಮಾಗ್ರಿ ಖರೀದಿ ಮಾಡುವುದನ್ನು ನಿಷೇಧಿಸಲಾಗಿದ್ದು, ಅನಾವಶ್ಯಕವಾಗಿ ಒಂದು ವೇಳೆ ಪೇಟೆಗೆ ಬಂದರೆ ವಾಹನ ಜಪ್ತಿ ಮಾಡಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಆಯಾಯ ಪ್ರದೇಶಗಳಲ್ಲಿ ಇರುವಂತಹ ಅಂಗಡಿಗಳಲ್ಲೇ ಖರೀದಿ ಮಾಡಬೇಕು. ತೀರಾ ಅಗತ್ಯ ಕೆಲಕ್ಕೆ ಪೇಟೆಗೆ ಆಗಮಿಸಬಹುದು. ಅದರ ಹೊರತಾಗಿ ಅನಾವಶ್ಯಕವಾಗಿ ಪೇಟೆಗೆ ಆಗಮಿಸುವಂತಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Advertisement. Scroll to continue reading.