Connect with us

Hi, what are you looking for?

Diksoochi News

Uncategorized

ಕುಂದಾಪುರ : ಸಿಎಂ ಘೋಷಿಸಿದ ಪ್ಯಾಕೇಜ್ ಜನತಾ ಪ್ಯಾಕೇಜ್ ಅಲ್ಲ, ಇದೊಂದು ಬೋಗಸ್ ಪ್ಯಾಕೇಜ್ : ಅಜಿತ್ ಕುಮಾರ್ ಶೆಟ್ಟಿ

0

ಕುಂದಾಪುರ : ಇದೊಂದು ಡ್ರಾಮ ಸರಕಾರ. ಇವತ್ತು ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಪ್ಯಾಕೇಜ್ ಜನತಾ ಪ್ಯಾಕೇಜ್ ಅಲ್ಲಾ ಇದೊಂದು ಬೋಗಸ್ ಪ್ಯಾಕೇಜ್. ಇದು ಬಿಜೆಪಿ ತಂತ್ರಗಾರಿಕೆ ಎಂದು ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳಿಗೆ ಒಬ್ಬ ಒಳ್ಳೆ ಗುತ್ತಿಗೆದಾರನಿಗೆ ತಾವು 400 ಅಥವಾ 500 ಕೋಟಿ ಕೆಲಸ ಕೊಡುತ್ತೀರಾ? ರಾಜ್ಯದ ಜನತೆ ಇಂತಹ ಸಂಕಷ್ಟದಲ್ಲಿರುವ ಸ್ಥಿತಿಯಲ್ಲಿರುವಾಗ 1250 ಕೋಟಿ ಪ್ಯಾಕೇಜ್ ಘೋಷಣೆ ಮಾಡಿ ಇದೊಂದು ಜನತಾ ಪ್ಯಾಕೇಜ್ ಅನ್ನುವಂತಹದ್ದು ಹಾಸ್ಯಸ್ಪದವಾಗಿದೆ ಎಂದು ಟೀಕಿಸಿದ್ದಾರೆ.

ಗಾರೆ ಕೆಲಸ ಮಾಡುವವರು ಕಟ್ಟಡ ಕಾರ್ಮಿಕರ ಪ್ರತಿ ದಿನದ ಸಂಬಳ ಒಂದು ಸಾವಿರ. ಹೀಗಿರುವಾಗ ಸ್ವಾಮಿ ನೀವು ಕೊಡುವ ತಿಂಗಳಿಗೆ 3ಸಾವಿರ ರೂಪಾಯಿಯಿಂದ ಹೇಗೆ ಜೀವನ ಮಾಡುದು? ಈಗಾಗಲೇ ಬಡವರು ಕಟ್ಟಡ ಕಾರ್ಮಿಕರು ಈ ಪ್ಯಾಕೇಜ್ ಅನ್ನು ತಿರಸ್ಕರಿಸಿದ್ದಾರೆ. ಈ ಪ್ಯಾಕೇಜ್ ಘೋಷಣೆಯಿಂದಾಗಿ ಸರಕಾರ ಬಡವರ ಪರ ಕೃಷಿಕರ ಪರವಾಗಿಲ್ಲ ಎನ್ನುವಂತಹದ್ದು ಮತ್ತೊಮ್ಮೆ ಸಾಬೀತಾಗಿದೆ ಎಂದು ಅವರು ಹೇಳಿದ್ದಾರೆ.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!