Connect with us

Hi, what are you looking for?

Diksoochi News

Uncategorized

ಪಡುಬಿದ್ರಿ : ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ನಾರಾಯಣ ರಾವ್ ನಿಧನ

0

ವರದಿ: ಶಫೀ ಉಚ್ಚಿಲ

ಪಡುಬಿದ್ರಿ : ಇಲ್ಲಿನ ಖಡ್ಗೇಶ್ವರೀ ಬ್ರಹ್ಮಸ್ಥಾನದ ಪ್ರಥಮ ಪಾತ್ರಿ ಪಡುಬಿದ್ರಿ ನಿವಾಸಿ ಪಿ.ಜಿ ನಾರಾಯಣ ರಾವ್ (84) ಅಸೌಖ್ಯದಿಂದ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಇಂದು(ಮೇ.20) ರಂದು ನಿಧನ ಹೊಂದಿದ್ದಾರೆ.

ಮೃತರು ಪತ್ನಿ ಇಬ್ಬರು ಪುತ್ರರು ಹಾಗು ಪುತ್ರಿಯರನ್ನು ಅಗಲಿದ್ದಾರೆ. ಇವರು ಖಡ್ಗೇಶ್ವರೀ ಸನ್ನಿಧಾನದಲ್ಲಿ ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಪಾತ್ರಿಗಳಾಗಿ ನಿಷ್ಠೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿರುತ್ತಾರೆ.

Advertisement. Scroll to continue reading.

ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮಾಜದ ಹಿರಿಯರು ಖ್ಯಾತನಾಮರು ಆಗಿದ್ದ ಇವರು ಉಡುಪಿ ಅಷ್ಠ ಮಠಾಧೀಶರಿಂದ ಇತ್ತೀಚೆಗೆ ನಡೆದಿದ್ದ ಕಾಪು ತಾ| ತೃತೀಯ ಸಾಹಿತ್ಯ ಸಮ್ಮೇಳನ ಹಾಗು ಬೆಂಗಳೂರಿನ ಉದ್ಯಮಿ ಪ್ರಕಾಶ್ ಶೆಟ್ಟಿ ಅವರ ಪ್ರಕಾಶಾಭಿನಂದನ ಕಾರ್ಯಕ್ರಮ ಸೇರಿದಂತೆ ಹಲವೆಡೆಗಳಲ್ಲಿ ಸನ್ಮಾನಿಸಲ್ಪಟ್ಟಿದ್ದರು.

ಗಣ್ಯರ ಸಂತಾಪ

‘ನಡೆದಾಡುವ ದೇವರು’ ಎಂಬಂತೆ ದೇಶ ವಿದೇಶಗಳಲ್ಲಿ ಅಸಂಖ್ಯ ಅಭಿಮಾನಿ ಅನುಯಾಯಿಗಳನ್ನು ನಾರಾಯಣ್ ರಾವ್ ಹೊಂದಿದ್ದರು. ನಾರಾಯಣ ರಾವ್ ನಿಧನಕ್ಕೆ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರೀಯ ತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ,ಶಾಸಕ ಲಾಲಾಜಿ ಆರ್ ಮೆಂಡನ್,ಮಾಜಿ ಸಚಿವ ವಿನಯಕುಮಾರ್ ಸೊರಕೆ,ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ,ಪಡುಬಿದ್ರಿ ವನದುರ್ಗಾ ಟ್ರೆಸ್ಟ್ನ ವೈ.ಎನ್ ರಾಮಚಂದ್ರ ರಾವ್ ಸೇರಿದಂತೆ ಹಲವರು ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!