Connect with us

Hi, what are you looking for?

Diksoochi News

Uncategorized

ಹೆಬ್ರಿ : ಫೀಲ್ಡಿಗಿಳಿದ ತಹಶೀಲ್ದಾರ್; ವಾಹನಗಳು ಸೀಝ್

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಸರಕಾರದ ಖಡಕ್ ಆದೇಶ ದಂತೆ ಇವತ್ತಿನಿಂದ ಬೆಳಿಗ್ಗೆ ಹತ್ತು ಗಂಟೆ ನಂತರ ಅನಾವಶ್ಯಕವಾಗಿ ವಾಹನಗಳಲ್ಲಿ ತಿರುಗಾಡುವವರಿಗೆ ಕೇಸು ದಾಖಲಿಸಿ ಸೀಜ್ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಹೆಬ್ರಿ ತಹಶೀಲ್ದಾರ್ ಪುರಂದರ ಕೆ. ಮತ್ತು ಅಧಿಕಾರಿಗಳ ತಂಡ ಫೀಲ್ಡಿಗಿಳಿದಿದೆ. ಅನಗತ್ಯವಾಗಿ ಸಮಯ ಮೀರಿ ವಾಹನಗಳಲ್ಲಿ ತಿರುಗಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದರು.ಕೆಲವರ ಮೇಲೆ ಕೇಸು ದಾಖಲಿಸಿ, ವಾಹನಗಳನ್ನು ಸೀಝ್ ಮಾಡಿ ಲಾಕ್ ಡೌನ್ ಉಲ್ಲಂಘಿಸಿದವರಿಗೆ ತಹಸದೀಲ್ದಾರ್ ಶಾಕ್ ನೀಡಿದರು.


ನಾಳೆಯಿಂದ ಬೆಳಿಗ್ಗೆ 9 ನಲವತ್ತೈದಕ್ಕೆ ತಮ್ಮ ಕೆಲಸಗಳ ಮುಗಿಸಿ, ಹತ್ತು ಗಂಟೆ ನಂತರ ತಿರುಗಾಡುವುದು ಕಡ್ಡಾಯವಾಗಿ ನಿಷೇಧ ಮಾಡಲಾಗಿದೆ ಎಂದು ತಹಶೀಲ್ದಾರ್ ಜನರಿಗೆ ಎಚ್ಚರಿಕೆ ನೀಡಿದರು. ಹೆಬ್ರಿ ಪೋಲೀಸರು ಇವರಿಗೆ ಸಾಥ್ ನೀಡಿದರು. ಕಂದಾಯ ನಿರೀಕ್ಷಕ ಹಿತೇಶ್ ಯು.ಬಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!