Connect with us

Hi, what are you looking for?

Diksoochi News

Uncategorized

ಪಡುಬಿದ್ರಿ ಸಿಎ ಬ್ಯಾಂಕ್ ವತಿಯಿಂದ ಕಾಪು ಫ್ರಂಟ್ಲೈನ್ ವಾರಿಯರ್ಸ್ ಗೆ  ಆಕ್ಸಿಮೀಟರ್, ಫೇಸ್ ಶೀಲ್ಡ್

0

ಪಡುಬಿದ್ರಿ : ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರು, ಟಿವಿ ಮಾಧ್ಯಮದವರು,ಪೊಲೀಸರು ಹಾಗು ಬ್ಯಾಂಕ್ ವ್ಯಾಪ್ತಿಯ ನಾಲ್ಕು ಗ್ರಾ.ಪಂ ಸಿಬ್ಬಂದಿಗಳಿಗೆ ಪಲ್ಸ್ ಆಕ್ಸಿಮೀಟರ್ ಹಾಗು ಫೇಸ್ ಶೀಲ್ಡ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ವೈ ಸುದೀರ್ ಕುಮಾರ್ ಮಾತನಾಡಿ, ಕೊರೊನಾ ನಿಭಾಯಿಸುವಲ್ಲಿ ಪತ್ರಕರ್ತರು,ಪೊಲೀಸರು ಹಾಗು ಗ್ರಾ.ಪಂ ಸಿಬ್ಬಂದಿಗಳು ಮುಂಚೂಣಿಯಲ್ಲಿದ್ದಾರೆ.
ಸರಕಾರ ಸೂಚಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ಮುಕ್ತಗೊಳಿಸಲು ಪ್ರತೀಯೊಬ್ಬರ ಸಹಕಾರ ಅತ್ಯಗತ್ಯವಾಗಿದೆ.

ಪಡುಬಿದ್ರಿ ಸಹಕಾರಿ ಬ್ಯಾಂಕಿನಲ್ಲಿ ಸಾಲ ಪಡೆದವರಿಗೆ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ
ಬಡ್ಡಿ ರಿಯಾಯಿತಿ ನೀಡುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸುದಾಗಿ ಹೇಳಿದರು.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ ಉಪಸ್ಥಿತರಿದ್ದರು.ಸಿಇಒ ನಿಶ್ಮಿತಾ ಕಾರ್ಯ ಕ್ರಮ ನಿರೂಪಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!