ಉಡುಪಿ : ಇಡೀ ಜಗತ್ತೇ ಸ್ಥಬ್ದವಾಗಿ ನಿಂತಿರುವ ಈ ಪರಿಸ್ಥಿತಿಯಲ್ಲಿ ಮೂಕವಾಗಿ ಬಿಟ್ಟಿರುವ ಮನಸ್ಸುಗಳನ್ನು ಸಾಹಿತ್ಯದ ಕಡೆ, ಕಲೆಗಳ ಕಡೆ ತಿರುಗಿಸುವ ಮೂಲಕ ಕ್ರಿಯಾಶೀಲಗೊಳಿಸುವ ಆಶಯದೊಂದಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಕಿರು ಕಥೆಗಳನ್ನು ಆಹ್ವಾನಿಸುತ್ತಿದೆ. ಸುಮಾರು 100 ಹಿರಿಯ ಹಾಗೂ ಯುವ ಕತೆಗಾರರಿಂದ ಕಿರು ಕಥೆ ಗಳನ್ನು ಆಹ್ವಾನಿಸುತ್ತಿದೆ.
ನಿಯಮಗಳು
- ಕಥೆಯು ಸುಮಾರು 250 ಪದಗಳನ್ನು ಮೀರಿರಬಾರದು, ಸ್ವರಚಿತವಾಗಿದ್ದು ಕನ್ನಡ ಭಾಷೆಯಲ್ಲಿರಬೇಕು.
- ಮೌಲ್ಯಯುತ ಕಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ.
- ಎಲ್ಲಿಯೂ ಪ್ರಕಟಗೊಂಡಿರದ ಲೇಖಕರ ಒಂದು ಕಥೆಯ ಜತೆ ಸ್ವ ವಿವರ, ವಿಳಾಸದೊಂದಿಗೆ ಪಾಸ್ಪೋರ್ಟ್ ಸೈಜಿನ ಭಾವಚಿತ್ರ ಕಳುಹಿಸಬೇಕು.
- ಕಥೆಯನ್ನು ಪಿ.ಡಿ.ಎಫ್ ಅಥವಾ ವಡ9 ಫೈಲ್ ನಲ್ಲಿ ಕಳಿಸಬೇಕು.
- ಕಥೆಯನ್ನು 2021 ಜೂನ್ 30ರ ಒಳಗಡೆ ನಮ್ಮ email :samskruthi.vishwa@gmail.com ಗೆ ಕಳುಹಿಸಬೇಕು.
- ಕಥೆಗಳ ಆಯ್ಕೆ ಪ್ರಕಾಶಕರದ್ದು.
- ಸಿದ್ಧಪಡಿಸಿದ ಕಥಾ ಸಂಕಲನವನ್ನು ಆಗಸ್ಟ್ ತಿಂಗಳ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ವಿವರಗಳಿಗೆ
ಮರವಂತೆ ನಾಗರಾಜ್ ಹೆಬ್ಬಾರ್ :
ಚರವಾಣಿ: 9480266876
ರಾಜೇಶ್ ಭಟ್ ಪಣಿಯಾಡಿ :
ಚರವಾಣಿ : 9844549824
ಪೂರ್ಣಿಮ ಜನಾರ್ದನ್
ಚರವಾಣಿ : 9481214104
ಇವರನ್ನು ಸಂಪರ್ಕಿಸಬಹುದು.
Advertisement. Scroll to continue reading.

ವಿಳಾಸ : ರವಿರಾಜ್ ಹೆಚ್ ಪಿ . ಸಂಚಾಲಕರು,
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ‘ಛಾಯಾನಟ್’ ಬುಡ್ನಾರ್ ರಸ್ತೆ, ಕುಂಜಿಬೆಟ್ಟು, ಉಡುಪಿ -576102 .
ಚರವಾಣಿ : 9845240309
Visit us : svpudupi.org
Page: Samskruthi Vishwa Prathisthana, UDUPI
Advertisement. Scroll to continue reading.

In this article:Diksoochi news, diksoochi Tv, diksoochi udupi, Samskrithi Vishwa Orathistana

Click to comment