ವರದಿ: ಶಫೀ ಉಚ್ಚಿಲ
ಕಾಪು: ಪಡುಬಿದ್ರೆ, ಮುದರಂಗಡಿ ಹಾಗೂ ಶಿರ್ವ ಅರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿದ ಶಾಸಕ ಲಾಲಾಜಿ ಆರ್ ಮೆಂಡನ್, ಪ್ರದೇಶಾಭಿವೃದ್ಧಿ ನಿಧಿಯಿಂದ ಕೊಡಲ್ಪಡುವ ಪಲ್ಸ್ ಆಕ್ಸಿಮೀಟರ್ ಗಳನ್ನು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಿಗೆ ಹಸ್ತಾಂತರಿಸಿದರು.
ಸುಮಾರು 10 ಲಕ್ಷ ರೂಗಳನ್ನು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬರುವ ಹತ್ತು ಆರೋಗ್ಯ ಕೇಂದ್ರಗಳಿಗೆ ಹಾಕ್ಸಿ ಮೀಟರ್ ಒದಗಿಸುವ ನಿಟ್ಟಿನಲ್ಲಿ ಮೀಸಲಿರಿಸಲಾಗಿದ್ದು, ಅದರಂತೆ ಇಂದು ಪಡುಬಿದ್ರೆ ಆರೋಗ್ಯ ಕೇಂದ್ರಕ್ಕೆ 60, ಮುದರಂಗಡಿ ಅರೋಗ್ಯ ಕೇಂದ್ರಕ್ಕೆ 50, ಶಿರ್ವ ಆರೋಗ್ಯ ಕೇಂದ್ರಕ್ಕೆ 80 ಪಲ್ಸ್ ಒಕ್ಸಿಮೀಟರ್ ಗಳನ್ನು ಹಸ್ತಾಂತರಿಸಲಾಯಿತು.


ಆರೋಗ್ಯ ಕೇಂದ್ರಗಳಿಗೆ ಹಸ್ತಾಂತರಿಸಿದ ಹಾಕ್ಸಿ ಮೀಟರ್ ಗಳನ್ನು ಆಯಾ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿಗೆ ಒಳಗಾಗಿ ಹೋಮ್ ಐಸೋಲೇಷನ್ ಒಳಗಾಗಿರುವ ಮಂದಿಗೆ ತಾತ್ಕಾಲಿಕವಾಗಿ ಸಂಬಂಧಪಟ್ಟ ಆಶಾ ಕಾರ್ಯಕರ್ತರ ಮುಖಾಂತರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಪು ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಶಿಲ್ಪ ಜಿ ಸುವರ್ಣ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಶಶಿಪ್ರಭ ಶೆಟ್ಟಿ, ನೀತಾ ಗುರುರಾಜ್, ಕಾಪು ಬಿಜೆಪಿ ನಿಕಟಪೂರ್ವ ಅಧ್ಯಕ್ಷರು ಪ್ರಕಾಶ್ ಶೆಟ್ಟಿ ಹಾಗೂ ಸ್ಥಳೀಯ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು,ಸದಸ್ಯರುಗಳು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.