ವರದಿ : ಶಫೀ ಉಚ್ಚಿಲ
ಪಡುಬಿದ್ರಿ: 50 ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳಿರುವ ಪಡುಬಿದ್ರಿ, ಬೆಳಪು, ಶಿರ್ವ ಗ್ರಾಮಗಳನ್ನು ಜೂ.2 ರಿಂದ ಐದು ದಿನಗಳ ವರೆಗೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಗತ್ಯ ವಸ್ತು ಖರೀದಿಗೆ ಮಾರುಕಟ್ಟೆಯಲ್ಲಿ ಮುಗಿಬಿದ್ದರು.


ಗ್ರಾಮಾಡಳಿತವು ಲಾಕ್ಡೌನ್ ಘೋಷಣೆಯ ಬಗ್ಗೆ ತಿಳಿದಿದ್ದರೂ ಮಾರುಕಟ್ಟೆ ಪ್ರದೇಶದಲ್ಲಿ ಸಾಮಾಜಿಕ ಅಂತರ ಕಾಪಾಡುವಲ್ಲಿ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿಲ್ಲ. ಜನ ಕೊರೊನಾವನ್ನು ಮರೆತು ಪೊಲೀಸರ ಸಮ್ಮುಖದಲ್ಲೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ದೃಶ್ಯ ಕಂಡು ಬಂತು. ಪಡುಬಿದ್ರಿ ಪೇಟೆ, ಕಾರ್ಕಳ ಹೆದ್ದಾರಿ ಉದ್ದಕ್ಕೂ ವಾಹನ ನಿಲುಗಡೆಯಿಂದ ಸಂಚಾರಕ್ಕೂ ತೊಡಕು ಉಂಟಾಯಿತು. ಅಲ್ಲದೆ ಖರೀದಿಗೆ ನಿಗದಿಯಾದ ಸಮಯ 10- 11 ಬಗ್ಗೆ ಗೊಂದಲ ಜನರಲ್ಲಿ ಮೂಡಿತ್ತು.
Advertisement. Scroll to continue reading.
