Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಹನೆಹಳ್ಳಿ ಗ್ರಾ.ಪಂ. ಗಡಿ ಬಂದ್; ಕಾರ್ಯ ಪ್ರವೃತ್ತರಾದ ಕೋವಿಡ್ ಕಾರ್ಯಪಡೆ

0

ವರದಿ‌: ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಉಡುಪಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕೋವಿಡ್ ಸೋಂಕು ಇರುವ 35 ಗ್ರಾಮ ಪಂಚಾಯತಿಯಲ್ಲಿ ಬ್ರಹ್ಮಾವರ ತಾಲೂಕಿನ ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿ ಕೂಡಾ ಒಂದಾಗಿದ್ದು ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಿಸಲು ಗ್ರಾಮಪಂಚಾಯತಿ ಬುಧವಾರ ವಿಶೇಷ ಕಾರ್ಯಪಡೆ ಮೂಲಕ ಸೋಂಕು ನಿವಾರಣೆಯಲ್ಲಿ ಕಾರ್ಯಪ್ರವೃತ್ತವಾಗಿದೆ.
ಮಂಗಳವಾರ ಸಂಜೆಯೆ ಸಾರ್ವಜನಿಕರಿಗೆ ಮೈಕ್ ಮೂಲಕ ಗ್ರಾಮ ಸೀಲ್ ಡೌನ ಆದ ವಿಷಯ ತಿಳಿಸಿ ನಿಯಮಗಳನ್ನು ಪಾಲಿಸುವಂತೆ ಕೋರಲಾಯಿತು. ಬುಧವಾರ ಬೆಳಿಗ್ಗೆ 10 ಗಂಟೆಗೆ ಗ್ರಾಮಕ್ಕೆ ಸಂಪರ್ಕ ಇರುವ ಎಲ್ಲಾ ರಸ್ತೆಗಳನ್ನು ಬ್ರಹ್ಮಾವರ ಪಿ.ಎಸ್.ಐ ಗುರುನಾಥ್ ಬಿ ಹಾದಿಮನೆ ಸಮಕ್ಷಮದಲ್ಲಿ ಬಂದ್ ಮಾಡಲಾಯಿತು.

ಕೋವಿಡ್ ಪರೀಕ್ಷೆ

Advertisement. Scroll to continue reading.


ಲಾಕ್ ಡೌನ್ ನಲ್ಲಿ ಹೈನುಗಾರಿಗೆ ಹಾಲು ನೀಡುವ ಅವಕಾಶ ಇದ್ದು, ಗ್ರಾಮದ ಜನರ ಸುರಕ್ಷತೆಗಾಗಿ ಬಾರಕೂರು ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ ರೋಹಿಣಿಯವರ ನೇತೃತ್ವದಲ್ಲಿ ಹನೆಹಳ್ಳಿ ಮತ್ತು ಕೂರಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ 136 ಸದಸ್ಯರ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು.


ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಅರುಂಧತಿ ಏಸುಮನೆ , ಕಾರ್ಯದರ್ಶಿ ಉಮೇಶ್ ಕಲ್ಯಾಣಪುರ, ಗ್ರಾಮ ಲೆಕ್ಕಿಗ ಭೀಮ ರಾಜ್ ಹೊರಟ್ಟಿ, ಆಶಾ ಕಾರ್ಯಕರ್ತೆ ವಂದನಾ, ಕೋವಿಡ್ ಕಾರ್ಯಪಡೆಯ ಸದಸ್ಯರು ಹಾಜರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!