ಹೆಬ್ರಿ : ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ಕೆಲ್ ಟೆಕ್ ಏನರ್ಜೀಸ್ ಲಿಮಿಟೆಡ್ (ಕೆ. ಇ. ಎಲ್) ಕಂಪೆನಿಯಲ್ಲಿ ಸರಿ ಸುಮಾರು 250 ರಿಂದ 300 ಕಾರ್ಮಿಕರು ದಿನ ನಿತ್ಯ ಕಾರ್ಯ ನಿರ್ವಹಿಸುತ್ತಾ ಇರುತ್ತಾರೆ. ಇಲ್ಲಿ ಕೋವಿಡ್ ಗೆ ಸಂಬಂಧಪಟ್ಟ ಯಾವುದೇ ಕಾನೂನಿನ ಪಾಲನೆ ಆಗುತ್ತಿಲ್ಲ. ಈ ಕಂಪೆನಿಗೆ ಹೊರ ರಾಜ್ಯದಿಂದ ಪ್ರತಿದಿನ ಅಂದಾಜು 10 ರಿಂದ 15 ಟ್ರಕ್ ಗಳು ಲೋಡಿಂಡ್ ಗೆ ಬರುತ್ತದೆ. ಈ ಕಂಪೆನಿಯಲ್ಲಿ ಸ್ಫೋಟಕ ಸಾಮಗ್ರಿಗಳಿಗೆ ಸಂಭಂದಪಟ್ಟ ವಸ್ತುಗಳು ತಯಾರಾಗುತ್ತದೆ.
ಇದೇ ಕಾರಣದಿಂದ ವರಂಗ ಗ್ರಾಮದಲ್ಲಿ ಕೊವಿಡ್ ಸೋಂಕು ಹೆಚ್ಚಾಗುತ್ತಿದೆ. ಆದ ಕಾರಣ ಕರ್ನಾಟಕ ಸರ್ಕಾರದ ಮಾರ್ಗಸೂಚನೆಯಂತೆ ಜೂನ್ 2 ರಿಂದ 7 ರ ವರೆಗೆ ಹೊರಡಿಸಿದ ಆದೇಶದ ಅನ್ವಯಕ್ಕೆ ಈ ಕೆ. ಇ.ಎಲ್. ಕಂಪೆನಿಯನ್ನು ಒಳಪಡಿಸಬೇಕಾಗಿ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣ ಗೌಡ ಬಣ) ಹೆಬ್ರಿ ತಾಲೂಕ್ ವರಂಗ ಘಟಕದಿಂದ ತಹಶೀಲ್ದಾರ್ ಪುರಂದರ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು. ಕರ್ನಾಟಕ ರಕ್ಷಣಾ ವೇದಿಕೆ ಹೆಬ್ರಿ ತಾಲ್ಲೂಕ್ ವರಂಗ ಘಟಕದ ಅಧ್ಯಕ್ಷ ವಿ. ಆರ್. ಸತೀಶ್ ಆಚಾರ್ಯ, ಗೌರವ ಅಧ್ಯಕ್ಷ ಉದಯ ಸೇರಿಗಾರ, ಮಹಿಳಾ ಅಧ್ಯಕ್ಷೆ ಸುಲತ ಆಚಾರ್ಯ ಮತ್ತು ಸದಸ್ಯರಾದ ಶ್ರೀನಿವಾಸ ನಾಯಕ್ ಉಪಸ್ಥಿತಿಯಲ್ಲಿ ಮನವಿ ಪತ್ರ ನೀಡಲಾಯಿತು