ವರದಿ : ದಿನೇಶ್ ರಾಯಪ್ಪನಮಠ
ಶಿವಮೊಗ್ಗ ಲೋಕಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ ಅನುದಾನ ಮಂಜೂರು ಮಾಡಲಾಗಿದೆ.
ನಾನು ಸಂಸದನಾದ ಅವಧಿಯಲ್ಲಿ 2020-21 ಹಾಗೂ 2021-22 ನೇ ಸಾಲಿನಲ್ಲಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 8500 ಕೋ.ರೂ. ಅನುದಾನ ಮಂಜೂರು ಮಾಡಿರುವ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಜೈರಾಂ ಗಡ್ಕರಿಯವರಿಗೆ ಧನ್ಯವಾದ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಅನುಮೋದನೆಯಾದ 5 ಕಾಮಗಾರಿಗಳು

ರಾ. ಹೆ. 169 ರ ಶಿವಮೊಗ್ಗ ನಗರದ ಸಂದೇಶ್ ಮೋಟಾರ್ಸ್ ನಿಂದ ಹರಕೆರೆ ವರೆಗೆ 4 ಪಥದ ರಸ್ತೆ ನಿರ್ಮಾಣಕ್ಕೆ 38.00ಕೋಟಿ ರೂ.
ರಾ.ಹೆ. 766(ಅ) ಬೈಂದೂರು _ ರಾಣೆಬೆನ್ನೂರು ರಸ್ತೆಯ ಆಯ್ದ ಭಾಗಗಳಲ್ಲಿ ನಾಗೋಡಿ ಬಳಿ ಜಯನಗರದಿಂದ ಹೊಸನಗರ ವರೆಗೆ, ಬಟ್ಟೆ ಮಲ್ಲಪ್ಪದಿಂದ ಯಡೇಹಳ್ಳಿ ವರೆಗೆ ಮತ್ತು ಶಿಕಾರಿಪುರ ಮಾಸೂರು ರಟ್ಟೆ ಹಳ್ಳಿಯ ಮತ್ತು ಹಲಗೇರಿ ಬಳಿಯ ಒಟ್ಟು 29.45 ಕಿ.ಮೀ. ಉದ್ದದ 10 ಮೀ. ಅಗಲದ ದ್ವಿಪಥದ ರಸ್ತೆ ನಿರ್ಮಾಣಕ್ಕೆ 210.00 ಕೋ. ರೂ.
ರಾಣೇಬೆನ್ನೂರು ರಸ್ತೆಯ ಕಿ.ಮೀ ಸಂಪೇ ಕಟ್ಟೆಯಿಂದ ಜಯನಗರದ ವರೆಗಿನ ರಸ್ತೆಗೆ ಪರ್ಯಾಯವಾಗಿ ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ 640 ಮೀ.ಉದ್ದದ ಸೇತುವೆ ಮತ್ತು ಸುತ್ತಾ, ಮಳಲಿ, ಬೆಕ್ಕೋಡಿ, ಗುಡ್ಡೆಕೊಪ್ಪ ಮತ್ತು ಹೆಬ್ಬುರ್ಲಿ ಮಾರ್ಗವಾಗಿ 16 ಕಿ.ಮೀ. ಉದ್ದದ ದ್ವಿಪಥದ ರಸ್ತೆ ನಿರ್ಮಾಣ ರೂ. 30.00 ಕೋಟಿ ರೂ.
ರಾ.ಹೆ. 206 ರ ತುಮಕೂರು – ಹೊನ್ನಾವರ ರಸ್ತೆಯ ಕಿ.ಮೀ. ಶಿವಮೊಗ್ಗದ ಸಿಂಹಧಾಮದಿಂದ ಆನಂದಪುರದ ವರೆಗೆ (220 ರಿಂದ 259 ಕಿ.ಮೀ) ಕುಂಸಿ ಗ್ರಾಮದ ಬೈಪಾಸ್ ರಸ್ತೆ ನಿರ್ಮಾಣ ಒಳಗೊಂಡಂತೆ ಒಟ್ಟು 39 ಕಿ.ಮೀ. ಉದ್ದದ 4 ಪಥದ ರಸ್ತೆ ನಿರ್ಮಾಣ 325.00 ಕೋ.ರೂ.

ಚಿತ್ರದುರ್ಗ – ಶಿವಮೊಗ್ಗ ರಸ್ತೆಯ (ರಾ.ಹೆ 13) ರ ಕಿ.ಮೀ 511 ರ ಹೊಳೆ ಹೊನ್ನೂರು ಬಳಿಯ ಪುರಾತನವಾದ ಭದ್ರಾ ಸೇತುವೆ ದುರಸ್ಥಿಗೊಳಿಸುವ ಕಾಮಗಾರಿ 2.00 ಕೋ.ರೂ.
ಅನುಮೋದನೆ ಮಾಡಿರುವ ಕಾಮಗಾರಿಗಳು
ರಾ. ಹೆ. 766(ಅ) ಬೈಂದೂರು – ರಾಣೇಬೆನ್ನೂರು ರಸ್ತೆಯ ಕಿ.ಮೀ 56 ರಿಂದ 86 ರ ವರೆಗಿನ ಸಂಪೇ ಕಟ್ಟೆಯಿಂದ ಜಯನಗರ ವರೆಗಿನ ರಸ್ತೆಗೆ ಪರ್ಯಾಯವಾಗಿ ಬೆಕ್ಕೋಡಿ ಬಳಿ ಶರಾವತಿ ಹಿನ್ನೀರಿಗೆ 640 ಮೀ.ಉದ್ದದ ಸೇತುವೆ ಮತ್ತು ಸುತ್ತಾ, ಮಳಲಿ, ಬೆಕ್ಕೋಡಿ, ಗುಡ್ಡೆಕೊಪ್ಪ ಮತ್ತು ಹೆಬ್ಬುರ್ಲಿ ಮಾರ್ಗವಾಗಿ 16 ಕಿ.ಮೀ. ಉದ್ದದ ದ್ವಿಪಥದ ರಸ್ತೆ ನಿರ್ಮಾಣ ರೂ. 0. 56 ಕೋಟಿ ರೂ.
ರಾ.ಹೆ. 766(ಅ) ಬೈಂದೂರು – ರಾಣೇ ಬೆನ್ನೂರು ರಸ್ತೆ 0.00 ಯಿಂದ 38.70 ಕಿ.ಮೀ.(ಬೈಂದೂರಿನಿಂದ ನಿಟ್ಟೂರು) ವರೆಗೆ ಕೊಲ್ಲೂರು ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಮತ್ತು ಕೊಲ್ಲೂರು ಘಾಟಿ ರಸ್ತೆಯ ಅಗಲೀಕರಣ ಒಳಗೊಂಡಂತೆ ದ್ವಿಪಥದ (10 ಮೀ.ಅಗಲದ) ರಸ್ತೆ ನಿರ್ಮಾಣ – 1.35 ಕೋ.ರೂ.

ರಾ.ಹೆ. 169(0) ತೀರ್ಥಹಳ್ಳಿ – ಮಲ್ಪೆ ರಸ್ತೆಯ 33.00 ರಿಂದ 41.00 ಕಿ.ಮೀ. ವರೆಗೆ 8.00 ಕಿ.ಮೀ. ಉದ್ದದ(ಆಗುಂಬೆ ಘಾಟಿ) ರಸ್ತೆಯಲ್ಲಿ ಭಾರೀ ವಾಹನಗಳು ಸರಾಗವಾಗಿ ಚಲಿಸಲು ಯೋಗ್ಯವಾದ ದ್ವಿಪಥದ 10 ಮೀ. ಅಗಲದ ರಸ್ತೆ ನಿರ್ಮಾಣ 0.50 ಕೋ.ರೂ.
ರಾ.ಹೆ. 206ರ ತುಮಕೂರು – ಹೊನ್ನಾವರ ರಸ್ತೆಯ ಕಿ.ಮೀ. 220 ರಿಂದ 259 ಶಿವಮೊಗ್ಗದ ಸಿಂಹಧಾಮದಿಂದ ಆನಂದ ಪುರ ವರೆಗೆ ಕುಂಸಿ ಗ್ರಾಮದ ಬೈಪಾಸ್ ರಸ್ತೆ ನಿರ್ಮಾಣ ಒಳಗೊಂಡಂತೆ ಒಟ್ಟು 39 ಕಿ.ಮೀ. ಉದ್ದದ 4 ಪಥದ ರಸ್ತೆ ನಿರ್ಮಾಣ 1.37 ಕೋ.ರೂ.
ರಾ.ಹೆ. 206 ರ ಐ.ಅ.ಸಂ 79(ಕುಂಸಿ), ಐ.ಅ.ಸಂ 110(ಹೊಸೂರು), ಐ.ಅ.ಸಂ. 152(ತಾಳಗುಪ್ಪ) ಹಾಗೂ ರಾ.ಹೆ. 766(ಅ) ರ ಐ.ಅ.ಸಂ.105(ಆನಂದಪುರ) ರಲ್ಲಿ ರೈಲ್ವೇ ಲೆವೆಲ್ ಕ್ರಾಸಿಂಗ್ ಗಳಿಗೆ ಬದಲಾಗಿ ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ 1.52 ಕೋ.ರೂ.

