Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಗ್ರಾಮವನ್ನು ಕೋವಿಡ್ ಮುಕ್ತಗೊಳಿಸುವ ಪಣ; ಹನೆಹಳ್ಳಿ ಗ್ರಾ.ಪಂ. ಯುವಕರಿಂದ ಶ್ರಮ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ನಮ್ಮ ಗ್ರಾಮ ನಮ್ಮ ಸುರಕ್ಷತೆ ಇದು ಬಾರಕೂರು ಹನೆಹಳ್ಳಿ ಗ್ರಾಮ ಪಂಚಾಯತಿಯ ಮಾಸ್ತಿ ನಗರದ ಯುವಕರು ತಮ್ಮ ಗ್ರಾಮವನ್ನು ಕೋವಿಡ್ ಮುಕ್ತಗೊಳಿಸಲು ಶ್ರಮಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಹಲವಾರು ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ 50 ಕ್ಕಿಂತ ಹೆಚ್ಚು ಸೋಂಕು ಇರುವಲ್ಲಿ ಜಿಲ್ಲಾಧಿಕಾರಿಗಳು ಮಾಡಿದ ಆದೇಶಕ್ಕೆ ಬುಧವಾರ ಗ್ರಾಮ ಪಂಚಾಯತಿ ವ್ಯಾಪ್ತಿಯನ್ನು ಸಂಪರ್ಕ ಮಾಡುವ ಎಲ್ಲಾ ರಸ್ತೆಯನ್ನು ಸಂಚಾರ ನಿಷೇಧಿಸಿ ಬಂದ್ ಮಾಡಲಾಗಿತ್ತು. ಆದರೆ ಗುರುವಾರ ಬೆಳಿಗ್ಗೆ ಕೆಲವು ವಾಹನ ಸವಾರರು ಬ್ಯಾರಿಕೇಡ್ ನ್ನು ಬದಿಗಿರಿಸಿ ಸಂಚಾರ ಮಾಡುವುದನ್ನು ಕಂಡು ಕೆಲಹೊತ್ತು ಸ್ವಲ್ಪ ಸಂಘರ್ಷ ದ ವಾತಾವರಣ ಉಂಟಾಗಿತ್ತು. ಬಳಿಕ ಇಲ್ಲಿನ ಕಾಲೇಜು ರಸ್ತೆಯ ಸಂಪರ್ಕದಲ್ಲಿ ಮಾಸ್ತಿ ನಗರದ ಯುವಕರು ನಿರ್ವಹಣೆ ಮಾಡುತ್ತಿದ್ದಾರೆ.

ರಂಗನಕೆರೆಯಲ್ಲಿ ನವಗ್ರಾಮದ ಯುವಕರು ಗಡಿ ಕಾಯುತ್ತಿದ್ದಾರೆ. ಹಾಗೆ ನೀಲಾವರ ಭಾಗದ ಗಡಿಯಲ್ಲಿ ಕೂರಾಡಿಯ ಒಂದು ಯುವ ಪಡೆ ಅಲ್ಲಿಯೆ ಠೀಕಾಣಿ ಹೂಡಿದೆ. ಒಟ್ಟಾರೆಯಾಗಿ ಹನೆಹಳ್ಳಿ ಗ್ರಾಮವನ್ನು ಐದು ದಿನಗಳ ಕಾಲ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ, ಗ್ರಾಮವನ್ನು ಕೋವಿಡ್ ಮುಕ್ತ ಮಾಡುವಲ್ಲಿ ಗ್ರಾಮದ ಯುವ ಜನರೇ ಕೋವಿಡ್ ಕಾರ್ಯ ಪಡೆ ಪೊಲೀಸ್ ಗ್ರಹ ರಕ್ಷಕದಳದೊಂದಿಗೆ ಸಹಕರಿಸುತ್ತಿರೋದು ಶ್ಲಾಘನೀಯ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!