ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಬಯೋಪಿಕ್ ಸಿನಿಮಾವಾಗಿ ಹೊರಹೊಮ್ಮಲಿದೆ. ಅದೂ `ಭಾರತ ಸಿಂಧೂರಿ’ಯಾಗಿ. ಸಾಹಿತಿ, ನಿರ್ದೇಶಕ ಕೃಷ್ಣ ಸ್ವರ್ಣಸಂದ್ರ ಚಿತ್ರವನ್ನು ನಿದೇಶನ ಮಾಡುತ್ತಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಮ್ಸ್ ಸಂಸ್ಥೆ ಭಾರತ ಸಿಂಧೂರಿ ಚಿತ್ರವನ್ನು ನಿರ್ಮಿಸಲಿದೆ. ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ರೋಹಿಣಿ ಸಿಂಧೂರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ದಕ್ಷ ಐಎಎಸ್ ಆಫೀಸರ್ ಎಂಬ ಖ್ಯಾತಿ ಪಡೆದಿರುವ ರೋಹಿಣಿ ಸಿಂಧೂರಿ ಹುಟ್ಟೂರು ಆಂಧ್ರಪ್ರದೇಶ ಹಾಗೂ ಕರ್ತವ್ಯ ನಿರ್ವಹಿಸಿದ್ದ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ರೋಹಿಣಿ ಸಿಂಧೂರಿ ಸಾಧನೆಗಳನ್ನು ಚಿತ್ರದಲ್ಲಿ ತೋರಿಸಲಾಗುವುದಂತೆ. ಈಗಾಗಲೇ ರೋಹಿಣಿ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.