ಬೆಂಗಳೂರು : ಬೆಂಗಳೂರು ಗ್ರಾಮಾಂತರ ಎಸ್ ಪಿ ರವಿ ಡಿ. ಚೆನ್ನಣ್ಣನವರ್ ಸೇರಿದಂತೆ ಒಟ್ಟು 12 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ರವಿ ಚನ್ನಣ್ಣನವರ್ ಅವರನ್ನು ಬೆಂಗಳೂರಿನ ಸಿಐಡಿ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಎಸ್ ಪಿ ಹುದ್ದೆಯಿಂದ ಆರ್.ಚೇತನ್ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಕೋಲಾರ ಎಸ್ ಪಿ ಆಗಿದ್ದ ಕಾರ್ತಿಕ್ ರೆಡ್ಡಿ ಅವರನ್ನು ವಯರ್ ಲೆಸ್ ವಿಭಾಗದ ಎಸ್ ಪಿ ಆಗಿ ನೇಮಕ ಮಾಡಲಾಗಿದೆ. ರಾಹುಲ್ ಕುಮಾರ್ ಶಹಪುರ್ವಾಡ ಅವರನ್ನು ಬೆಂಗಳೂರಿನ ಸಿಐಟಿ ಎಸ್ ಪಿ ಹುದ್ದೆಯಿಂದ ವರ್ಗಾವಣೆ ಮಾಡಿ ತುಮಕೂರು ಜಿಲ್ಲಾ ಎಸ್ ಪಿ ಆಗಿ ನೇಮಿಸಲಾಗಿದೆ. ಹನುಮಂತರಾಯ ಅವರನ್ನು ದಾವಣಗೆರೆ ಎಸ್ ಪಿ ಹುದ್ದೆಯಿಂದ ಹಾವೇರಿ ಜಿಲ್ಲಾ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ.
ಡಾ.ಎ.ಎನ್.ಪ್ರಕಾಶ್ ಗೌಡ ಅವರನ್ನು ಮೈಸೂರು ನಗರ ಲಾ ಆಂಡ್ ಆರ್ಡರ್ ಡಿಸಿಪಿ ಹುದ್ದೆಯಿಂದ ಬೆಂಗಳೂರಿನ ಇಂಟರ್ ಸೆಕ್ಯೂರಿಟಿ ವಿಭಾಗದ ಎಸ್ ಪಿಯಾಹಿ, ಕೆ.ಜಿ.ದೇಔರಾಜು ಅವರನ್ನು ಹಾವೇರಿ ಎಸ್ ಪಿ ಹುದ್ದೆಯಿಂದ ಬೆಂಗಳೂರಿನ ಸಿಐಟಿಯ ಎಸ್ ಆಗಿ, ಸಿಬಿ ರ್ಯಾಶಂತ್ ಅವರನ್ನು ಮೈಸೂರು ಎಸ್ ಪಿ ಹುದ್ದೆಯಿಂದ ವರ್ಗಾವಣೆ ಮಾಡಿ, ದಾವಣಗೆರೆ ಎಸ್ ಪಿ ಆಗಿ ವರ್ಗಾವಣೆ ಮಾಡಲಾಗಿದೆ. ದೆಕ್ಕ ಕಿಶೋರ್ ಬಾಬು ಅವರನ್ನು ಕಲುಬುರ್ಗಿ ಲಾ ಆಂಡ್ ಆರ್ಡರ್ ಡಿಸಿಪಿ ಹುದ್ದೆಯಿಂದ ಕೋಲಾರ ಎಸ್ ಆಗಿ, ಕೋನ ವಂಶಿ ಕೃಷ್ಣ ಅವರನ್ನು ತುಮಕೂರು ಎಸ್ ಪಿ ಹುದ್ದೆಯಿಂದ ಬೆಂಗಳೂರು ಗ್ರಾಮಾಂತರ ಎಸ್ ಪಿ ಆಗಿ ನೇಮಿಸಲಾಗಿದೆ. ಬೆಂಗಳೂರಿನ ಇಂಟರ್ ಸೆಕ್ಯೂರಿಟಿ ಡಿವಿಸನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರದೀಪ್ ಗುಂಟಿ ಮೈಸೂರು ನಗರ ಲಾ ಆಂಡ್ ಆರ್ಡರ್ ಡಿಸಿಪಿ ಆಗಿ, ಅದ್ದೂರು ಶ್ರೀನಿವಾಸಲು ಅವರನ್ನು ಬೆಂಗಳೂರಿನ ವೈರ್ ಲೆಸ್ ವಿಭಾಗದ ಎಸ್ ಪಿ ಹುದ್ದೆಯಿಂದ ಕಲ್ಬುರ್ಗಿಯ ಲಾ ಆಂಡ್ ಆರ್ಡರ್ ಡಿಸಿಪಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
