ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೈಬ್ರಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೇಸ್ ಕಾರ್ಯದರ್ಶಿ ವಡ್ಡರ್ಸೆ ಅಜಿತ್ ಕುಮಾರ್ ಶೆಟ್ಟಿ ಮಾತನಾಡಿ, ಕೋಟ ಶ್ರೀನಿವಾಸ್ ಪೂಜಾರಿ ಅವರು ಹಿಂದೆ ಪಂಚಾಯತ್ ಸದಸ್ಯರಾಗಿದ್ದಾಗ ಅವರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆದಾಗ ಅದರ ಪರಿಣಾಮ ತಿಳಿದಿತ್ತು. ನೀವು ಅಂದು ಫೋಟೋಗ್ರಾಫರ್ ಆಗಿದ್ದಾಗ ಸಾಮಾನ್ಯ ಜನರ ಕಷ್ಟ ಹಾಗೂ ನಿಮಗೆ ನೀವು ನಿಮ್ಮ ಸ್ವಂತ ಹಣದಿಂದ ಪೆಟ್ರೋಲ್ ಹಾಕುವಾಗ ಅದರ ಪರಿಣಾಮ ತಟ್ಟಿತ್ತು. ಆದರೆ ಇಂದು ನೀವು ಸಾಮಾನ್ಯ ಜನರ ತೆರಿಗೆ ಹಣದಲ್ಲಿ ಸರಕಾರದ ದುಡ್ಡಲ್ಲಿ ಪೆಟ್ರೋಲ್ ಹಾಕಿಸುವ ನಿಮಗೆ ಈ ನಮ್ಮ ಪ್ರತಿಭಟನೆಯಿಂದ ಏನು ತೊಂದರೆ ಇಲ್ಲ. ಆದರೆ ಒಬ್ಬ ಮಂತ್ರಿಯಾಗಿ ಜನರ ಕಷ್ಟದ ಸಮಯದಲ್ಲಿ ಬೆಲೆ ಏರಿಕೆ ವಿರುದ್ಧ ಕೇಂದ್ರ ಸರಕಾರದ ಗಮನಕ್ಕೆ ತರುವ ಕೆಲಸ ಮಾಡಬೇಕೇ ವಿನಃ ಇಂತಹ ಬಾಲಿಷ ಹೇಳಿಕೆ ಸಚಿವರಾದವರಿಗೆ ಸೂಕ್ತ ಅಲ್ಲಾ ಎಂದು ಕಿಡಿಕಾರಿದರು.
ಮೊದಲು ನಿಮ್ಮದೇ ಪಕ್ಷದ ಓರ್ವ ಪಂಚಾಯತ್ ಅಧ್ಯಕ್ಷ ಮಾಡಿರುವ ಕೊಲೆ ಬಗ್ಗೆ ತನಿಖೆ ಮಾಡಿಸಿ. ಕನಿಷ್ಠ ಕೊಲೆಯಾದವನು ನಿಮ್ಮದೇ ಕಾರ್ಯಕರ್ತನಾಗಿದ್ದಾನೆ. ಓರ್ವ ಸಚಿವರಾಗಿ ಆತನ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸ ನಿಮ್ಮಿಂದ ಆಗಲಿಲ್ಲ. ಸಾವಿನಲ್ಲೂ ರಾಜಕೀಯ ಮಾಡುವುದು ನಿಮಗೇನು ಹೊಸತಲ್ಲ ಎಂದು ವಾಗ್ದಾಳಿ ನಡೆಸಿದರು.


ಪ್ರತಿಭಟನೆಯಲ್ಲಿ ಕೋಟ ಬ್ಲಾಕ್ ಅಧ್ಯಕ್ಷ ಶಂಕರ್ ಕುಂದರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ಸುನಿಲ್ ಮಡಿವಾಳ್, ಉಪಾಧ್ಯಕ್ಷ ರಕ್ಷಿತ್ ಪೂಜಾರಿ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಕಿಶನ್ ಹೆಗ್ಡೆ ಕೊಲ್ಕೆಬೈಲು, ಕಿಶೋರ್ ಕುಮಾರ್ ಶೆಟ್ಟಿ ಮೈಳ್ಕೊಮ, ಆವರ್ಸೆ ಪಂಚಾಯತ್ ಮಾಜಿ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ದಿವಾಕರ್ ಗಾಣಿಗ, ಸದಸ್ಯರಾದ ಲಕ್ಷ್ಮಣ್ ಪೂಜಾರಿ, ರಘು ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಗುಂಡಣ್ಣ ಶಿರಿಯರ, ಮಂಜುನಾಥ್ ಕುಲಾಲ್, ವಿಜೇಂದ್ರ, ಸಂತೋಷ, ಮಹೇಶ್ ಉಪಸ್ಥಿತರಿದ್ದರು.
