Connect with us

Hi, what are you looking for?

Diksoochi News

ರಾಜ್ಯ

ಬಿಪಿಎಲ್ ಕಾರ್ಡ್ ದಾರರ ಮೂರು ತಿಂಗಳ ಕರೆಂಟ್ ಬಿಲ್ ಮನ್ನಾ; ಹರಿದಾಡುತ್ತಿದೆ ಸುಳ್ಳು ನೋಟಿಸ್

0

ಮಂಗಳೂರು : ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಸುಳ್ಳು ಸುದ್ದಿಗಳಿಗೇನೂ ಕೊರತೆ ಇಲ್ಲ. ಇದೀಗ ವಿದ್ಯುತ್ ಬಿಲ್ ಮನ್ನಾ ಮಾಡುವ ಬಗೆಗಿನ ಸುಳ್ಳು ಸುದ್ದಿಯೊಂದು ಹರಿದಾಡುತ್ತಿದೆ.

ಆರ್ಥಿಕ ಪ್ಯಾಕೇಜ್ ಎಲ್ಲರಿಗೂ ತಲುಪದ ಕಾರಣ ಆರ್ಥಿಕ ಹೊರೆಯಿಂದ ಹೊರಬರಲು ಅನುಕೂಲವಾಗುವಂತೆ ಮಾಡಲು 3 ತಿಂಗಳಿನ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲಾಗಿದ್ದು, ತಮ್ಮ ಶಾಖಾ ವ್ಯಾಪ್ತಿಯಲ್ಲಿ ಬರುವ ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮನೆಯ ಸ್ಥಾವರಗಳ ಆರ್ ಆರ್ ನಂಬರ್ ನ್ನು ಕೂಡಲೇ 3 ದಿನಗಳೊಳಗೆ ನೀಡಲು ಈ ಮೂಲಕ ಸೂಚಿಸಲಾಗಿದೆ ಎಂದು ನೋಟೀಸ್ ನಲ್ಲಿ ಬರೆಯಲಾಗಿದೆ. ಶಿವಮೊಗ್ಗ ಜಿಲ್ಲೆಯ ಬೆಜ್ಜವಳ್ಳಿಯ ಮೆಸ್ಕಾಂ ಶಾಖೆಯನ್ನು ಉಲ್ಲೇಖಿಸಲ್ಪಟ್ಟ ಸುತ್ತೋಲೆ ಹರಿದಾಡುತ್ತಿದೆ.
ಆದರೆ ಇದೊಂದು ಸುಳ್ಳು ಸುದ್ದಿ ಎಂದು ಮೆಸ್ಕಾಂ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದು, ಆ ರೀತಿಯ ಸುತ್ತೋಲೆ ಬಂದಿಲ್ಲ ಎಂದು ‘ದಿಕ್ಸೂಚಿ ನ್ಯೂಸ್’ ಗೆ ಸ್ಪಷ್ಟ ಪಡಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!