Connect with us

Hi, what are you looking for?

Diksoochi News

ಕರಾವಳಿ

ಜಿಲ್ಲಾ, ತಾಲೂಕು, ಗ್ರಾ.ಪಂ ನೌಕರರನ್ನು ಕೋರೋನಾ ವಾರಿಯರ್ಸ್ ಆಗಿ ಘೋಷಿಸಿ; ಬ್ರಹ್ಮಾವರ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಮನವಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ನೌಕರರನ್ನು ಕೋರೋನಾ ವಾರಿಯರ್ಸ್ ಆಗಿ ಆದೇಶ ಹೊರಡಿಸುವಂತೆ ಬ್ರಹ್ಮಾವರ ತಾಲೂಕು ನಾಗರೀಕ ಹಿತರಕ್ಷಣಾ ಸಮಿತಿ ರಾಜ್ಯ ಮುಖ್ಯಮಂತ್ರಿ, ಪಂಚಾಯತ್ ರಾಜ್ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಪಂಚಾಯತ್ ಉಡುಪಿ ಇವರಿಗೆ ಬ್ರಹ್ಮಾವರ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ಮನವಿ ಪತ್ರ ಕಳುಹಿಸಲಾಗಿದೆ.

  ಪಂಚಾಯತ್‍ರಾಜ್ ಇಲಾಖೆಯಲ್ಲಿ ಚಾಡಮಾಲಿಗಳು, ಪಂಪ್ ಅಪರೇಟರ್, ಬಿಲ್ ಕಲೆಕ್ಟರ್, ಜವಾನ, ಗುಮಾಸ್ತ, ಸ್ವಚ್ಚತಾ ಕಾರ್ಯಕರ್ತರು ಸೇರಿದಂತೆ ಸುಮಾರು 70 ಸಾವಿರ ಮಂದಿ ಹಗಲು ರಾತ್ರಿ ಎನ್ನದೇ ಕೋರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಗಲು ರಾತ್ರಿ ಸೇವೆ ಮಾಡುವ ನೌಕರರನ್ನು ಕಡೆಗಣಿಸಲಾಗಿದ್ದು  ಕೊರೋನಾ ರೋಗಿಗಳ  ಮನೆ ಭೇಟಿ,  ಸೀಲ್ ಡೌನ್, ಅಗತ್ಯ ಸಾಮಾಗ್ರಿಗಳ ಪೂರೈಕೆ, ಕೋರೊನಾ ತ್ಯಾಜ್ಯ ವಿಲೇವಾರಿ, ಬೀದಿ ಸ್ವಚ್ಚತೆ ಹಾಗು ಗ್ರಾಮೀಣಾಭಿವೃದ್ಧಿ ಇಲಾಖೆ ಹೊರಡಿಸುವ ಎಲ್ಲಾ ಆದೇಶಗಳನ್ನು ಗ್ರಾಮ ಪಂಚಾಯತ್ ನೌಕರರು ಪಾಲನೆ ಮಾಡುವಲ್ಲಿ ಶ್ರಮಿಸುವ ಇವರನ್ನು   ಯಾವುದೇ ಸೇವಾ ಭದ್ರತೆಯಿಲ್ಲದೆ ನೌಕರರನ್ನು ಕಡೆಗಳಿಸಿದೆ.

 ಪಂಚಾಯತ್‍ರಾಜ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಮತ್ತು ಅವರ ಕುಟುಂಬಸ್ಥರನ್ನು ಕೊರೋನಾ ವಾರಿಯರ್ಸ್ ಸೇವಾ ಭದ್ರತೆ ಯೋಜನೆಗೆ ಸೇರಿಸುವಂತೆ ಹಾಗೂ ಬಿಪಿಎಲ್ ಕಾರ್ಡ್ ಕೊಡಿಸುವಂತೆ ಬ್ರಹ್ಮಾವರ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಬಾರ್ಕೂರು ಸತೀಶ್ ಪೂಜಾರಿ, ಕಾರ್ಯದರ್ಶಿ ಬಿ.ಸದಾಶಿವ ಶೆಟ್ಟಿ ಹೇರೂರು, ಜಯಕರ ನಾಯಕ್, ಉಮೇಶ್ ಪೂಜಾರಿ, ಸರಕಾರವನ್ನು ಒತ್ತಾಯಿಸಿದ್ದು ಸೌಲಭ್ಯ ನೀಡದಿದ್ದಲ್ಲಿ  ನೌಕರರ ಪರವಾಗಿ ಕಾನೂನು ಹೋರಾಟಕ್ಕೂ ಸಿದ್ಧ ಎಂದು  ಮನವಿ ಸಲ್ಲಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!