ಉದ್ಯಾವರ: ನೂರಾರು ವರ್ಷ ಹಿಂದಿನ ಪಂಚಲೋಹದಿಂದ ನಿರ್ಮಿಸಲಾದ ಮೂಕಾಂಬಿಕಾ ದೇವಿಯ ಪುರಾತನ ವಿಗ್ರಹವೊಂದು ಉದ್ಯಾವರದ ಬೊಳ್ಜೆ ನದಿಯಲ್ಲಿ ಸ್ಥಳೀಯ ಮೀನುಗಾರರ ಬಲೆಯಲ್ಲಿ ಸಿಲುಕಿದ್ದು,ಅದನ್ನು ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಅರ್ಚಕರಿಗೆ ಒಪ್ಪಿಸಿದ್ದಾರೆ.
ಈ ಬಗ್ಗೆ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರು ಮಾತನಾಡಿ, ಉದ್ಯಾವರ ನದಿಯ ಸೇತುವೆ ಅಡಿಯಲ್ಲಿ ಮೀನುಗಾರರಿಗೆ ಸಿಕ್ಕಿದೆ.
ನೂರಾರು ವರ್ಷ ಹಿಂದಿನ ಮೂರ್ತಿ ಇದಾಗಿದ್ದು, ಹಲವಾರು ಸಮಯಗಳಿಂದ ಈ ಮೂರ್ತಿಯು ಉತ್ತಮ ಗುಣಮಟ್ಟದಲ್ಲಿದ್ದು,ಪಂಚಲೋಹಗಳಿಂದ ನಿರ್ಮಿಸಲ್ಪಟ್ಟಿದೆ. ದೇವಸ್ಥಾನಗಳಲ್ಲಿ ನೂತನ ಮೂರ್ತಿ ಪ್ರತಿಷ್ಠಾಪನೆ ಸಂದರ್ಭ ಹಳೆ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡಿರುವ ಸಾಧ್ಯತೆ ಇದೆ. ಈ ಮೂರ್ತಿ ಮುಂದೇನು ಮಾಡುವುದೆಂದು ತೀರ್ಮಾನಿಸಲಿದ್ದೇವೆ ಎಂದು ತಿಳಿಸಿದ್ದಾರೆ.
Advertisement. Scroll to continue reading.
