ಕಾಪು: ಮಾನ್ಸೂನ್ ಆರಂಭವಾಗುತ್ತಿದ್ದಂತೆ ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 13 ತೊಟ್ಟಂ ಮೂಳೂರು ಸಮೀಪದಲ್ಲಿ ಕಡಲಿನ ಅಬ್ಬರ ರಭಸಗೊಳ್ಳುತ್ತಿದೆ. ಪ್ರತಿದಿನ ಹತ್ತಾರು ತೆಂಗಿನ ಮರಗಳು ಕಡಲೊಡಳು ಸೇರಿಕೊಳ್ಳುತ್ತಿವೆ.
ಸುಮಾರು 2 ಕಿಲೋಮೀಟರ್ ಉದ್ದದಲ್ಲಿ ಜನ ವಸತಿ ಪ್ರದೇಶದಲ್ಲಿ ಕಡಲ್ಕೊರೆತವಾಗುತ್ತಿದ್ದು ತುರ್ತು ತಡೆಗೋಡೆ ನಿರ್ಮಿಸುವಂತೆ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.
Advertisement. Scroll to continue reading.