ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದಿಂದ ಕುಂದಾಪುರದ 5 ಪೊಲೀಸ್ ಠಾಣೆಯ ಸಿಬ್ಬಂದಿಗಳಿಗೆ ಕೊಡೆಗಳನ್ನು ವಿತರಿಸಲಾಯಿತು. ಈ ಸಂದರ್ಭ ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘದ ಅದ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ ಮಾತನಾಡಿ ಉಡುಪಿ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು 6 ಕಡೆಗಳಲ್ಲಿ ಮಾಡಿದ್ದು, ಅದರಲ್ಲಿ ಮುಖ್ಯವಾಗಿ ಸಿದ್ಧಾಪುರ, ಬಸ್ರೂರು,ಕೋಟೇಶ್ವರ, ಸಾಯಿಬ್ರಕಟ್ಟ, ಕಾರ್ಕಳದ ಗ್ರಾಮೀಣ ಭಾಗ ಪುಲ್ಕೇರಿಯಲ್ಲಿ ಮಾಡಿದ್ದೇವೆ. ಈ ಕೇಂದ್ರಗಳು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂಬುದು ಪ್ರಧಾನ ಮಂತ್ರಿಗಳ ಆಶಯವಾಗಿದೆ. ಅದರಂತೆ ಜನರಿಗೆ ಕಡಿಮೆ ಬೆಲೆಯಲ್ಲಿ, ಗುಣಮಟ್ಟದ ಜೌಷಧ ಸಿಗುತ್ತಿದೆ. ಕೇಂದ್ರಗಳನ್ನು ಯಶಸ್ವಿಯಾಗಿ ನಡೆಸಬೇಕೆಂಬುದು ಪ್ರಧಾನಮಂತ್ರಿಗಳ ಆಶಯ. ಈ ನೆಲೆಯಲ್ಲಿ ಅನೇಕ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್, ಮಾಸ್ಕ್ ಗಳನ್ನು ಉಚಿತವಾಗಿ ಜನೌಷಧಿ ಸಪ್ತಾಹಗಳಲ್ಲಿ ವಿತರಿಸಿದ್ದೇವೆ. ಕೊರೋನಾ ನಿಯಂತ್ರಿಸುವಲ್ಲಿ ಪೊಲೀಸರ ಪಾತ್ರ ಮಹತ್ವದ್ದು. ಹಾಗಾಗಿ ಈಗ ಜನೌಷಧಿ ಕೇಂದ್ರಗಳಿರುವ ಪೊಲೀಸ್ ಸ್ಟೇಷನ್ ಗಳ ಸಿಬ್ಬಂದಿಗಳಿಗೆ ಮಳೆಗಾಲಕ್ಕೆ ಅನುಕೂಲವಾಗುವಂತೆ ಕೊಡೆಗಳನ್ನು ವಿತರಿಸಿದ್ದೇವೆ ಎಂದರು.

ಅಮಾಸೆಬೈಲಿನಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ. ಕೊಡ್ಗಿಯವರಿಂದ ಕೊಡೆ ಹಸ್ತಾಂತರ ನಡೆದಿದ್ದು, ಶಂಕರನಾರಾಯಣದಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕಂಡ್ಲೂರಿನಲ್ಲಿ ಗ್ರಾ.ಪಂ ಅಧ್ಯಕ್ಷ ವಿಜಯ ಪುತ್ರನ್, ಕುಂದಾಪುರದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಕೊಡೆಗಳನ್ನು ಹಸ್ತಾಂತರಿಸಿದರು. ಆಯಾಯ ಸಂದರ್ಭ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಈ ವೇಳೆ ಉಪಾಧ್ಯಕ್ಷ ವಿಠಲ್ ಶೆಟ್ಟಿ, ನಿರ್ದೇಶಕ ಗಣೇಶ್ ಕಾಮತ್ , ಎ.ವಿ.ಉಡುಪ, ಅಮರ್ ಛಾತ್ರಾ,ಪ್ರದೀಪ್ ಹೆಬ್ಬಾರ್, ಸಿಇಓ ವೀರೇಂದ್ರ ಐತಾಳ್ ಉಪಸ್ಥಿತರಿದ್ದರು.






