Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ವಿದ್ಯುತ್ ದರ ಏರಿಕೆ ಮತ್ತು ಪವರ್ ಕಟ್ ವಿರುದ್ಧ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ವಿದ್ಯುತ್ ಬಿಲ್ ಲಾಕ್ ಡೌನ್ ಸಂದರ್ಭದಲ್ಲಿ ಮನ್ನಾ ಮಾಡಬೇಕು, ಯೂನಿಟ್ ಬೆಲೆ ಏರಿಸಿರುವ ದರ ಇಳಿಕೆ ಮಾಡಬೇಕು ಹಾಗೂ ವಿದ್ಯುತ್ ವ್ಯತ್ಯಯ ಪವರ್ ಕಟ್ ನಿರಂತರ ಆಗುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇಂದು ಹೆಬ್ರಿ ಮೆಸ್ಕಾಂ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಯಿತು.

ವಿದ್ಯಾರ್ಥಿಗಳಿಗೆ, ರೈತರಿಗೆ, ಉದ್ಯಮಿಗಳಿಗೆ ವಿದ್ಯುತ್ ದರ ಏರಿಕೆ, ಪವರ್ ಕಟ್ ಆಗುವುದರಿಂದ ಸಂಕಷ್ಟ ಎದುರಿಸುವಂತಾಗಿದೆ. ಹಾಗೆಯೇ ಲಾಕ್‌ ಡೌನ್ ಸಂದರ್ಭದಲ್ಲಿ ವಿದ್ಯುತ್ ಬಿಲ್ ಶುಲ್ಕ ಮನ್ನಾ ಮಾಡಬೇಕೆಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಇವರು ಹೆಬ್ರಿ ಮೆಸ್ಕಾಂ ಇಲಾಖೆಯ ಜೆಇ ಮೂಲಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಶೆಟ್ಟಿ ಹುತ್ತುರ್ಕೆ, ಸ್ಥಳೀಯ ಮುಖಂಡರಾದ ಸೀತಾನದಿ ರಮೇಶ ಹೆಗ್ಡೆ , ಎಚ್. ಬಿ. ಸುರೇಶ್, ಜನಾರ್ದನ್, ಮಹಿಳಾ ಮುಖಂಡರಾದ ಶಶಿಕಲಾ ಡಿ ಪೂಜಾರಿ, ಅಮರನಾಥ ಶೆಟ್ಟಿ ತಾಣ, ಚಂದ್ರಶೇಖರ ಬಾಯರಿ ಕಬ್ಬಿನಾಲೆ, ಸಂತೋಷ್ ನಾಯಕ್, NSUI ಘಟಕದ ಪ್ರಮುಖರು ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!