Connect with us

Hi, what are you looking for?

Diksoochi News

ಕರಾವಳಿ

ಕೋಟ: ಕಡಲ ಕಿನಾರೆಯಲ್ಲಿ ಹಳೆ ಬಲೆಗೆ ಸಿಕ್ಕಿ ಹಾಕಿಕೊಂಡಿದ್ದ ಕಡಲಾಮೆ ರಕ್ಷಣೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕೋಟ ಮಣೂರು ಪಡುಕರೆ ಕಡಲ ಕಿನಾರೆಯಲ್ಲಿ ಹಳೆ ಬಲೆಗೆ ಸಿಕ್ಕಿಹಾಕಿಕೊಂಡು ದಡ ಸೇರಿದ ಎರಡು ಕಡಲಾಮೆಯನ್ನು ಮಣೂರು ಪಡುಕರೆ ಶ್ರೀರಾಮ್ ಫ್ರೆಂಡ್ಸ್ ಯುವಕರು ರಕ್ಷಿಸಿ ಮರಳಿ ಕಡಲಿಗೆ ಬಿಟ್ಟ ಘಟನೆ ಶುಕ್ರವಾರ ನಡೆದಿದೆ.
ಇತ್ತೀಚೆಗಿನ ದಿನಗಳಲ್ಲಿ ಬಲು ಅಪರೂಪವೆಂಬಂತೆ ಕಡಲಾಮೆಗಳು ಗೋಚರಿಸುವ ಕಾಲಘಟ್ಟದಲ್ಲಿ ಅಲ್ಲಲ್ಲಿ ಬದುಕಿಳಿದ ಕಡಲಾಮೆಗಳ ರಕ್ಷಣೆಯಲ್ಲಿ ಯುವ ಸಮುದಾಯ ಹೆಚ್ಚಿನ ಮುತುವರ್ಜಿ ವಹಿಸಿದೆ.


ಸಮುದ್ರದಲ್ಲಿ ಬೋಟ್ ಗಳ ಕಡಿದು ಹೋದ ಬಲೆಗಳಿಗೆ ಸಿಲುಕಿ ಕಡಲಾಮೆಗಳು ದಡ ಸೇರಿದ್ದವು. ಇದು ಫ್ರೆಂಡ್ಸ್ ಸದಸ್ಯರ ಗಮನಕ್ಕೆ ತಂದ ಸ್ಥಳೀಯರು ಶೀಘ್ರಗತಿಯಲ್ಲಿ ಅದನ್ನು ತೆರವುಗೊಳಿಸಿ ಸಮುದ್ರಕ್ಕೆ ಮರಳಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀರಾಮ್ ಫ್ರೆಂಡ್ಸ್ ನ ಕಾರ್ತಿಕ್ ಮತ್ತು ನಾಗರಾಜ್ ಬಲೆಯಿಂದ ಬಿಡಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!