ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಗುರುವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಬ್ರಹ್ಮಾವರ ಪರಿಸರದಲ್ಲಿ ಹಲವಾರು ವರ್ಷದಿಂದ ಪತ್ರಿಕಾ ವಿತರಕನಾಗಿದ್ದು, ಕಳೆದ ಎರಡು ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರೂ ವಾರಕ್ಕೆ 2 ಬಾರಿ ಡಾಯಲಿಸಿಸ್ಗೆ ಒಳಗಾಗಿ ಅನಾರೋಗ್ಯದ ನಡುವೆ ವೃತ್ತಿ ಬದ್ಧತೆಯೊಂದಿಗೆ ಪ್ರತಿ ದಿನ ಮನೆ – ಮನೆಗೆ ಪತ್ರಿಕೆ ವಿತರಿಸುವ ರಾಜೇಶ್ ನಾಯಕ್ ಬ್ರಹ್ಮಾವರ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿ, ಅವರ ಚಿಕಿತ್ಸಾ ವೆಚ್ಚಕ್ಕೆ ಸಂಘದ ವತಿಯಿಂದ 5ಸಾವಿರ ರೂ. ಸಹಾಯಧನ ನೀಡಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ಕಾರ್ಯದರ್ಶಿ ರಾಜೇಶ್ ಗಾಣಿಗ ಅಚ್ಲಾಡಿ, ಖಜಾಂಚಿ ಮೋಹನ ಉಡುಪ, ಜಿಲ್ಲಾ ಸಂಘದ ಪ್ರತಿನಿಧಿ ಗಣೇಶ್ ಸಾಯಿಬರ ಕಟ್ಟೆ ಮತ್ತು ಸದಸ್ಯರುಗಳಾದ ಬಂಡೀಮಠ ಶಿವರಾಮ ಆಚಾರ್ಯ, ಗಣಪತಿ ವೈದ್ಯ, ಶೇಷಗಿರಿ ಭಟ್, ಚಂದ್ರಶೇಖರ ಬೀಜಾಡಿ, ಪ್ರವೀಣ ಮುದ್ದೂರು, ಹರೀಶ್ ಕಿರಣ್ ತುಂಗ, ರವೀಂದ್ರ ಕೋಟ, ಪ್ರವೀಣ್ ಬ್ರಹ್ಮಾವರ ಇನ್ನಿತರರು ಉಪಸ್ಥಿತರಿದ್ದರು.
