Connect with us

Hi, what are you looking for?

Diksoochi News

ಕರಾವಳಿ

ಕಾಪು : ಸ್ಥಳೀಯಾಡಳಿತವನ್ನು ನಿರ್ಲಕ್ಷಿಸಿ ಜಗದೀಶ್ ಶೆಟ್ಟರ್ ಬೆಳಪು ಭೇಟಿ; ದೇವಿಪ್ರಸಾದ್ ಶೆಟ್ಟಿ ಆಕ್ರೋಶ

0

ಕಾಪು: ಬೆಳಪುವಿಗೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡುವ ಸಮಯದಲ್ಲಿ ಸ್ಥಳೀಯಾಡಳಿತಕ್ಕೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿರುವ ಕುರಿತು ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ದೇವಿಪ್ರಸಾದ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಪು ಎಂಬ ಮಾದರಿ ಗ್ರಾಮಕ್ಕೆ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್ ಹಾಗೂ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ ನೀಡಿದ್ದು, ಸ್ಥಳೀಯ ಪಂಚಾಯಿತಿ ಹಾಗೂ ಸದಸ್ಯರಿಗೆ ಯಾವುದೇ ರೀತಿಯ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿರುವ ಬಗ್ಗೆ ಬೆಳಪು ದೇವಿಪ್ರಸಾದ್ ಶೆಟ್ಟಿ ಆಕ್ರೋಶ ಹೊರಹಾಕಿದ್ದಾರೆ.
ಬೆಳಪು ಕಾಡು ಇದ್ದ ಗ್ರಾಮವನ್ನು ನಾಡು ಮಾಡಲು ಬೆವರನ್ನು ರಕ್ತವನ್ನು ಆಗಿ ಸುರಿಸಿ ಸಾಕಷ್ಟು ವರ್ಷ ಹಗಲು-ರಾತ್ರಿ ದುಡಿದಿರುವವರು ನಾವು ಇವತ್ತು ರಾಜ್ಯ ಕೈಗಾರಿಕಾ ಸಚಿವರ ಭೇಟಿಯ ಬಗ್ಗೆ ಕಿಂಚಿತ್ತು ಮಾಹಿತಿ ನೀಡುವ ಸೌಜನ್ಯ ತೋರದ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕರ ಬಗ್ಗೆ ದೇವಿಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!