ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಅವರ ಪರಿಕಲ್ಪನೆಯಡಿ ಕೊರೋನಾ 3ನೇ ಅಲೆಯ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿಯೇ ಪ್ರಥಮವಾಗಿ ಕಾರ್ಕಳ-ಹೆಬ್ರಿ ತಾಲೂಕಿನ 15 ರ ವಯೋಮಾನದ ಕೆಳಗಿನ 40,000 ಮಕ್ಕಳ ಆರೋಗ್ಯ ತಪಸಣಾ ‘ವಾತ್ಸಲ್ಯ ಕಾರ್ಯಕ್ರಮ’ ದ ಅಂಗವಾಗಿ ಆರೋಗ್ಯ ತಪಸಣಾ ಶಿಬಿರವನ್ನು ಸ.ಹಿ.ಪ್ರಾ.ಶಾಲೆ ಶಿವಪುರದಲ್ಲಿ ಸೋಮವಾರ ನಡೆಸಲಾಯಿತು. ಈ ಕಾರ್ಯಕ್ರಮವನ್ನು ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರ್ ರತ್ನಾಕರ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಶಿವಪುರ ಗ್ರಾಮಪಂಚಾಯತ್ ಅಧ್ಯಕ್ಷರಾದ ಶೇಖರ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹೆಬ್ರಿ ತಾಲೂಕು ತಹಶೀಲ್ದಾರ್ ಕೆ.ಪುರಂದರ, ಶಿವಪುರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ವೇತಾ ರಾಘವೇಂದ್ರ, ನಿಕಟಪೂರ್ವ ಹೆಬ್ರಿ ತಾಲೂಕು ಪಂಚಾಯತ್ ಅಧ್ಯಕ್ಷ ರಮೇಶ ಪೂಜಾರಿ, ನಿಕಟಪೂರ್ವ ಹೆಬ್ರಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ವಾತ್ಯಲ್ಯ ಕಾರ್ಯಕ್ರಮದ ನೋಡಲ್ ಸುಮಿತ್ ಶೆಟ್ಟಿ ಬೈಲೂರು, ನವೀನ್ ನಾಯ್ಕ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಪೂಜಾರಿ.ಎಸ್, ಪಂಚಾಯತ್ ಮಾಜಿ ಅಧ್ಯಕ್ಷ ಹುಣ್ಸೆಯಡಿ ಸುರೇಶ್ ಶೆಟ್ಟಿ , ವೈದ್ಯರುಗಳಾದ ಡಾ. ಸಂತೋಷ್ ಮತ್ತು ಡಾ. ಸ್ಮಿತಾ, ಶಾಲಾ SDMC ಅಧ್ಯಕ್ಷ ಸುರೇಶ್ ಆಚಾರ್, ಹೆಬ್ರಿ ವಲಯದ ಶಿಕ್ಷಣ ಸಂಯೋಜಕರಾದ ವೆಂಕಟರಮಣ ಕಲ್ಕೂರ್ ಶಿವಪುರ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ಯಾಮಲಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.



