ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆಯಲ್ಲಿ ಒಟ್ಟು 43 ಮಂದಿ ಪ್ರತಿಜ್ಞಾ ಸ್ವೀಕರಿಸಿದ್ದಾರೆ. ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು. ಕರ್ನಾಟಕದ ಅದರಲ್ಲೂ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮೋದಿ ಸಚಿವ ಸಂಪುಟ ಸೇರಿದ್ದಾರೆ. ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಿಜೆಪಿಯಲ್ಲಿ ಸದಾ ಸಕ್ರಿಯವಾಗಿ ಗುರುತಿಸಿಕೊಂಡಿರುವ ಹೆಸರು ಶೋಭಾ ಕರಂದ್ಲಾಜೆ ಅವರದು. 1997 ರಲ್ಲಿ ಉಡುಪಿ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಅವರು ನಂತರದ ದಿನಗಳಲ್ಲಿ ಬಿಜೆಪಿ ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಕೊಂಡರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿ ಕಾರ್ಯ ನಿರ್ವಹಿಸಿರುವ ಅವರು, ಇಂಧನ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಲೋಕ ಸಭಾ ಚುನಾವಣೆಯಲ್ಲಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಸ್ವರ್ಧಿಸಿ 2 ಬಾರಿ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇವರೊಂದಿಗೆ ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ, ರಾಜೀವ್ ಚಂದ್ರಶೇಖರ್, ಬೀದರ್ ಸಂಸದ ಭಗವಂತ್ ಖೂಬೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರು :

- ನಾರಾಯಣ ರಾಣೆ
- ಸರ್ಬಾನಂದ್ ಸೋನೊವಾಲ್
- ಡಾ. ವೀರೇಂದ್ರ ಕುಮಾರ್
- ಜ್ಯೋತಿರಾದಿತ್ಯ ಸಿಂಧಿಯಾ
- ರಾಮಚಂದ್ರ ಪ್ರಸಾದ್ ಸಿಂಗ್
- ಅಶ್ವಿನಿ ವೈಭವ್
- ಪಶುಪತಿ ಕುಮಾರ್ ಪರಾಸ್
- ಕಿರಣ್ ರಿಜಿಜು
- ರಾಜ್ ಕುಮಾರ್ ಸಿಗ್
- ಹರ್ದೀಪ್ ಸಿಂಗ್ ಪುರಿ
- ಮನ್ಸುಖ್ ಮಾಂಡವಿಯಾ
- ಭೂಪೇಂದ್ರ ಯಾದವ್.
- ಪುರುಷೋತ್ತಮ್ ರುಪಾಲ
- ಜಿ ಕಿಶನ್ ರೆಡ್ಡಿ
- ಅನುರಾಗ್ ಸಿಂಗ್ ಠಾಕೂರ್
- ಪಂಕಜ್ ಚೌಧುರಿ
- ಅನುಪ್ರಿಯ ಸಿಂಗ್ ಪಟೇಲ್
- ಡಾ ಸತ್ಯಪಾಲ್ ಸಿಂಗ್ ಭಘೇಲ್
- ರಾಜೀವ್ ಚಂದ್ರಶೇಖರ್
- ಶೋಭಾ ಕರಂದ್ಲಾಜೆ
- ಭಾನುಪ್ರತಾಪ್ ಸಿಂಗ್ ವರ್ಮಾ
- ದರ್ಶನ ವಿಕ್ರಮ ಜರ್ದೋಶ್
- ಮೀನಾಕ್ಷಿ ಲೇಖಿ
- ಅನ್ನಪೂರ್ಣ ದೇವಿ
- ಎ. ನಾರಾಯಣ ಸ್ವಾಮಿ
- ಕೌಶಲ್ ಕಿಶೋರ್
- ಅಜಯ್ ಭಟ್
- ಬಿ.ಎಲ್ ವರ್ಮ
- ಅಜಯ್ ಕುಮಾರ್
- ಚೌಹಾಣ್ ದೇವುಸಿಂಗ್
- ಭಗವಂತ್ ಖೂಬಾ
- ಕಪಿಲ್ ಮೊರೇಶ್ವರ್ ಪಾಟೀಲ್
- ಪ್ರತಿಮಾ ಭೌಮಿಕ್
- ಡಾ. ಸುಭಾಶ್ ಸರ್ಕಾರ್
- ಡಾ ಭಗವತ್ ಕಿಶನ್ ರಾವ್ ಕರಡ್
- ಡಾ. ರಾಜ್ ಕುಮಾರ್ ರಂಜನ್ ಸಿಂಗ್
- ಡಾ. ಭಾರತಿ ಪ್ರವೀಣ್ ಪವಾರ್
- ಬಿಶ್ವೇಶ್ವರ್ ತುಡು
- ಶಂತನು ಠಾಕೂರ್
- ಮುಂಜಪರ ಮಹೇಂದ್ರಭಾಯಿ
- ಜಾನ್ ಬರ್ಲಾ
- ಡಾ. ಎಲ್ ಮುರುಗನ್
- ನಿತೀಶ್ ಪ್ರಾಮಾಣಿಕ್
