ಬ್ರಹ್ಮಾವರ : ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಬಾರಕೂರು ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಾರ್ಕೂರು ಇದರ ಸಹಭಾಗಿತ್ವದಲ್ಲಿ ಮೂರು ಹಂತಗಳಲ್ಲಿ ಕೋವಿಡ್-19 ಲಸಿಕಾ ಅಭಿಯಾನ ನಡೆಯಿತು.
ಕಾಲೇಜಿನ ಪ್ರಿನ್ಸಿಪಾಲ್ ಡಾ. ರಮೇಶ್ ಆಚಾರ್, ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೋಹಿಣಿ ನೇತೃತ್ವದಲ್ಲಿ ಲಸಿಕಾ ಕಾರ್ಯಕ್ರಮ ನಡೆಯಿತು.
ಮೂರು ದಿನಗಳಲ್ಲಿ ನಡೆದ ಶಿಬಿರದಲ್ಲಿ 494 ವಿದ್ಯಾರ್ಥಿಗಳು ಹಾಗೂ 29 ಜನ ಸಿಬ್ಬಂದಿ ವರ್ಗದವರು ಲಸಿಕೆಯನ್ನು ಪಡೆದುಕೊಂಡರು.