Connect with us

Hi, what are you looking for?

Diksoochi News

ಕರಾವಳಿ

ಕಟಪಾಡಿ : ‘ಪ್ರಗತಿಯತ್ತ ಒಂದು ಹೆಜ್ಜೆ’; ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ಬಂಟಕಲ್

0

ಕಟಪಾಡಿ: ತಾಂತ್ರಿಕ ಕ್ಷೇತ್ರದ ನೂತನ ಮಜಲುಗಳಾದ ‘ಕೃತಕ ಬುದ್ಧಿ’ ಮತ್ತೆ ‘ದತ್ತಾಂಶ ವಿಜ್ಞಾನ’ ಎಂಬ ವಿಷಯಗಳಲ್ಲಿ ನೂತನ ಇಂಜಿನಿಯರಿಂಗ್ ಕೋರ್ಸ್ ಗಳನ್ನು 2021-22ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲು ಅನುಮತಿ ದೊರಕಿದೆ ಎಂದು ಬಂಟಕಲ್ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ರತ್ನಕುಮಾರ್ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಡಿಯಲ್ಲಿ ನ್ಯಾಕ್ ಮತ್ತು ಎನ್.ಬಿ.ಎ ಮಾನ್ಯತೆ ಪಡೆದ
ಕರ್ನಾಟಕದ 79 ಕಾಲೇಜುಗಳಿಗೆ ಬಿಎಸ್ಸಿ ಕೋರ್ಸ್ ಪ್ರಾರಂಭಿಸಲು ಅನುಮತಿ ನೀಡಲಿದ್ದು,ಅದರಲ್ಲಿ ಕರಾವಳಿ ಭಾಗದಲ್ಲಿ ಆಯ್ಕೆಯಾದ ಕಾಲೇಜುಗಳಲ್ಲಿ ನಮ್ಮ ಸಂಸ್ತೆಯು ಒಂದಾಗಿದೆ.ಈ ನಿಟ್ಟಿನಲ್ಲಿ
ಮುಂದಿನ 2021-22 ರ ಶೈಕ್ಷಣಿಕ ವರ್ಷದ ಅವಧಿಯಲ್ಲಿ ನಾಲ್ಕು ವರ್ಷದ ಬಿಎಸ್ಸಿ ಕೋರ್ಸ್ ಪ್ರಾರಂಭಿಸಲು ನಾವು ಬದ್ಧರಾಗಿದ್ದೇವೆ.

ಈ ಸಂಸ್ಥೆ ಶೈಕ್ಷಣಿಕ ಸೇವೆಯಲ್ಲಿ ಹನ್ನೊಂದು ವರ್ಷಗಳನ್ನು ಪೂರೈಸಿದೆ.1200ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. 2500ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತಮ್ಮ ಇಂಜಿನಿಯರಿಂಗ್ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿ ದೇಶ-ವಿದೇಶಗಳ ಪ್ರತಿಷ್ಠಿತ ಕಂಪನಿಗಳಲ್ಲಿ ಉನ್ನತ ಸಂಶೋಧನಾ ಸಂಸ್ಥೆಗಳಲ್ಲಿ ತಮ್ಮ ವೃತ್ತಿ ಜೀವನವನ್ನು ನಡೆಸುತ್ತಿದ್ದಾರೆ.ಜಾಗತಿಕ ಮಟ್ಟದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಅವಕಾಶ ನೀಡಬಲ್ಲ ನೂತನ ಕೋರ್ಸ್ ವಿಧ್ಯಾರ್ಥಿಗಳ ವೃತ್ತಿ ಜೀವನ ಸುಭದ್ರಗೊಳಿಸಲು ಸಹಕಾರಿಯಾಗಲಿದೆ ಎಂದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ.ತಿರುಮಲೇಶ್ವರ ಭಟ್,ಉಪ ಪ್ರಾಂಶುಪಾಲರಾದ ಗಣೇಶ್ ಐತಾಳ್ ಉಪಸ್ಥಿತರಿದ್ದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!