ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಹೇರೂರು ಗ್ರಾಮದ ಸಂತೆಕಟ್ಟೆ ನದಿಯಲ್ಲಿ ಶನಿವಾರ ಪತ್ತೆಯಾಗಿದೆ. ಬೈಕಾಡಿ ಕಾಮೇಶ್ವರ ದೇವಸ್ಥಾನ ವಠಾರದ ನಿವಾಸಿ ಶ್ರೀಧರ ಮಯ್ಯ(60) ಮೃತರು. ಅವರು ಗುರುವಾರ ಸಂಜೆಯಿಂದ ಕಾಣೆಯಾಗಿದ್ದಾರೆ ಎಂದು ಬ್ರಹ್ಮಾವರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೃತರು ಕೋರ್ಟ್ ಕೆಲಸ ಇರುವುದರಿಂದ ಚಿಕ್ಕಮಗಳೂರಿಗೆ ಹೋಗುತ್ತಿರುವುದಾಗಿ ಮೊಬೈಲ್ ಫೆÇೀನ್ ಬಿಟ್ಟು ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಅದೇ ದಿನ ಸಂಜೆ ಅವರ ಮನೆಯ ಸಮೀಪ ಇರುವ ಕಾಮೇಶ್ವರ ದೇವಸ್ಥಾನದ ಮುಖ್ಯಸ್ಥರಾದ ಹರೀಶ್ ಹೊಳ್ಳರಿಗೆ ಅವರು ಬರೆದ ರಿಜಿಸ್ಟರ್ ಪತ್ರ ಬಂದಿದ್ದು, ಅದರಲ್ಲಿ ಮೃತ ಶ್ರೀಧರ ಮಯ್ಯರು ನನಗೆ ವಿಪರೀತ ಕಾಲು ನೋವು ಮತ್ತು ಬಿಕ್ಕಳಿಕೆ ಸಮಸ್ಯೆ ಇದ್ದು, ಎಲ್ಲಾ ರೀತಿಯಲ್ಲಿ ಚಿಕಿತ್ಸೆ ಪಡೆದರೂ ಗುಣವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಯಿಂದ ಹೊಳೆಗೆ ಹಾರಿ ಆತ್ಮ ಹತ್ಯೆ ಮಾಡಿಕೊಂಡಿದು,್ದ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿತ್ತು ಎಂದು ತಿಳಿದು ಬಂದಿದೆ. ಬ್ರಹ್ಮಾವರ ಪೆÇಲೀಸ್ ಠಾಣೆಯಲ್ಲಿ ಮೃತರ ಮಗಳು ದೂರು ನೀಡಿದ್ದು ಬಳಿಕ ಶವ ಮಹಜರು ಮಾಡಿ ಕುಟುಂಬಿಕರಿಗೆ ನೀಡಲಾಗಿದೆ.
