ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸಿದ ತೆಲುಗು ನಟ, ವಿಮರ್ಶಕ ಕತ್ತಿ ಮಹೇಶ್ ಇಂದು ವಿಧಿವಶರಾಗಿದ್ದಾರೆ. ಜೂ.26 ರಂದು ಮಹೇಶ್ ಇದ್ದ ಇನ್ನೋವಾ ಕಾರು ನಿಂತಿದ್ದ ಲಾರಿಗೆ ಡಿಕ್ಕಿಯಾಗಿತ್ತು. ತೀವ್ರ ಗಾಯಗೊಂಡಿದ್ದ ಅವರು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ಲಾಸ್ಟಿಕ್ ಸರ್ಜರಿ ಮೆದುಳು ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿತ್ತು. ಆಂಧ್ರ ಸರ್ಕಾರ ಚಿಕಿತ್ಸೆಗಾಗಿ 17 ಲಕ್ಷ ನೀಡಿತ್ತು. ಅಭಿಮಾನಿಗಳು, ಚಿತ್ರರಂಗ ಕತ್ತಿ ಮಹೇಶ್ ಬದುಕಿ ಬರಲೆಂದು ಪ್ರಾರ್ಥಿಸುತ್ತಿತ್ತು. 14 ದಿನಗಳ ಜೀವನ್ಮರಣ ಹೋರಾಟದ ಬಳಿಕ ಮಹೇಶ್ ಮರಳಿ ಬಾರದ ಊರಿಗೆ ಪಯಣಿಸಿದ್ದಾರೆ.
ಸಿನಿಮಾ ವಿಮರ್ಶಕರಾಗಿದ್ದ ಮಹೇಶ್ ಕತ್ತಿ, 2011 ರಲ್ಲಿ ಎಡಾರಿ ವರ್ಷಂ ಮೂಲಕ ಅಭಿನಯ ಆರಂಭಿಸಿದರು. ತೆಲುಗು ಬಿಗ್ ಬಾಸ್ ಮೊದಲ ಸೀಸನ್ ನ ಸ್ಪರ್ಧಿಯೂ ಆಗಿದ್ದರು.