ಕಾಪು: ಬಿಜೆಪಿ ಸರಕಾರ ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಯಾವುದೇ ತಯಾರಿ ನಡೆಸದೆ, ಮುಂದಿನ ಚುನಾವಣೆಗೆ ಸಿದ್ಧತೆ ನಡೆಸುವ ಭರದಲ್ಲಿದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತೈಲ ಬೆಲೆ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಸರಕಾರದ ವಿರುದ್ಧ ಕಾಪು ಪೇಟೆಯಲ್ಲಿ ಸೈಕಲ್ ಜಾಥ ನಡೆಸಿ, ರಸ್ತೆಯ ಮಧ್ಯೆ ಕಟ್ಟಿಗೆ ಇಟ್ಟು ಒಲೆ ಉರಿಸುವ ಮೂಲಕ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೇಂದ್ರದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಿರಂತರವಾಗಿ ಪೆಟ್ರೋಲ್ ಡೀಸೆಲ್ ಗ್ಯಾಸ್ ಮತ್ತು ದಿನಬಳಕೆ ವಸ್ತುಗಳ ದರವನ್ನು ಗಗನಕ್ಕೆ ಏರಿಸಿದೆ.ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರ ಅಧಿಕಾರದ ಕುರ್ಚಿ ಹಂಚುವ ಕಾರ್ಯದಲ್ಲಿ ತೊಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಪು ಬ್ಲಾಕ್ ಕಾಂಗ್ರೆಸ್ ನವೀನ್ ಚಂದ್ರ ಸುವರ್ಣ, ಕಾಂಗ್ರೆಸ್ ಮುಖಂಡರಾದ ನವೀನ್ ಚಂದ್ರ ಜೆ ಶೆಟ್ಟಿ,ರಮೀಝ್ ಹುಸೇನ್,ಗಣೇಶ್ ಕೋಟ್ಯಾನ್ ನವೀನ್ ಎನ್ ಶೆಟ್ಟಿ,ಗೀತಾ ವಾಗ್ಲೆ,ಅಶ್ವಿನಿ, ಜ್ಯೋತಿ ಮೆನನ್,ಜಿತೇಂದ್ರ ಪುಟಾರ್ಡೊ,ದಿನೇಶ್ ಕೋಟ್ಯಾನ್, ಶರ್ಫುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

