ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬ್ರಹ್ಮಾವರ ಫೌಂಡೇಶನ್ ಟ್ರಸ್ಟ್ ಪ್ರವರ್ತಕ ಬಿ.ಗೋವಿಂದ ರಾಜ್ ಹೆಗ್ಡೆ ಅವರ ನೇತೃತ್ವದಲ್ಲಿ ಬ್ರಹ್ಮಾವರ ಪರಿಸರದ ಆಶಾ ಕಾರ್ಯಕರ್ತೆಯರಿಗೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಕೆಲವು ಸಿಬ್ಬಂದಿಗಳಿಗೆ ಒಟ್ಟು 50 ಮಂದಿಗೆ 1200 ರೂ ವೆಚ್ಚದ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಜರುಗಿತು.

ಈ ಸಂದರ್ಭ ಆರೋಗ್ಯ ಕೇಂದ್ರದ ಡಾ.ಅಜಿತ್ ಕುಮಾರ್ ಶೆಟ್ಟಿ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಪ್ರತೀ ಮನೆಯವರನ್ನು ಭೇಟಿ ಆಗಿ ಸಾರ್ವಜನಿಕರ ಆರೋಗ್ಯದ ಕುರಿತು ಪ್ರಥಮ ಮಾಹಿತಿ ನೀಡುವವರು. ಅಲ್ಪ ಗೌರವ ಧನದಲ್ಲಿ ಮಾಡುವ ಅವರ ಸೇವಾ ಮನೋಭಾವವನ್ನು ಕಂಡು ನೆರವು ನೀಡಿದುದಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭ ಆರೋಗ್ಯ ಕೇಂದ್ರದ ಡಾ. ಮಹಾಬಲ, ಡಾ. ಮಹೇಶ್ ಐತಾಳ್, ಬ್ರಹ್ಮಾವರ ಪೌಂಡೇಶನ್ನ ಶಶಿಕಲಾ ಹೆಗ್ಡೆ , ಪ್ರತೀತ್ ಹೆಗ್ಡೆ, ಜಗದೀಶ್ ಶೆಟ್ಟಿಗಾರ್, ದೇವಕಿ , ಡೆರಿಕ್ ಇನ್ನಿತರರು ಉಪಸ್ಥಿತರಿದ್ದರು.
Advertisement. Scroll to continue reading.
