Connect with us

Hi, what are you looking for?

Diksoochi News

ಕರಾವಳಿ

ಕೋಟ : ಸಾಸ್ತಾನ-ಸ್ವಸಹಾಯ ಸಂಘದ ಸದಸ್ಯರುಗಳಿಗೆ ಲಾಭಾಂಶ ವಿತರಣೆ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ.ಸಿ.ಟ್ರಸ್ಟ್ ,ಪಾಂಡೇಶ್ವರ ವಲಯ ವತಿಯಿಂದ ಪ್ರಗತಿಬಂಧು ಸ್ವಸಹಾಯ ಸಂಘದ ಸದಸ್ಯರುಗಳಿಗೆ ಲಾಭಾಂಶ ವಿತರಣಾ ಕಾರ್ಯಕ್ರಮ ಸೋಮವಾರ ಸಾಸ್ತಾನದ ರೋಟರಿ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಧ.ಗ್ರಾ.ಯೋಜನೆ ಜಿಲ್ಲಾ ನಿರ್ದೇಶಕ ಗಣೇಶ್ ಬಿ, ಕಳೆದೆರಡು ವರ್ಷಗಳಿಂದ ಜನಸಾಮಾನ್ಯರು ಸಂದಿಗ್ಧ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಕೈಯಲ್ಲಿ ಕೆಲಸವಿಲ್ಲದೆ ಹಣದ ಆರ್ಥಿಕ ಮುಗ್ಗಟ್ಟಿನಲ್ಲಿದ್ದ ಕಾಲವನ್ನ ಅರಿತ ಕಾವಂದರರು ಸ್ವಸಹಾಯ ಸಂಘಗಳ ಮಿಗತೆ ಹಣದ ಲಾಭಾಂಶವನ್ನು ನೇರವಾಗಿ ತಲುಪಲು ಕ್ರಮಕೈಗೊಂಡಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆ ಸದಾ ಕಾಲ ಮಹಿಳೆಯ ಅಭಿವೃದ್ಧಿಯ ಬಗ್ಗೆ ಚಿಂತಿಸುತ್ತದೆ. ಈ ದಿಸೆಯಲ್ಲಿ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದಿದೆ. ಸ್ವಸಹಾಯಗಳ ಸಂಘಗಳ ಲಾಭಂಶ ಈ ಬಾರಿ ರಾಜ್ಯದಲ್ಲಿ 620 ಕೋಟಿ ತಲುಪಿದ್ದು, ಅದರಲ್ಲಿ ಉಡುಪಿ ಜಿಲ್ಲೆ 45 ಕೋಟಿ ರೂ.ಗಳ ಪಾಲು ಗಳಿಸಿದೆ. ಪಾಂಡೇಶ್ವರ ವಲಯ ಒಂದರಲ್ಲಿ 86 ಲಕ್ಷದ 50ಸಾವಿರ ರೂ. ಗಳನ್ನು ಇತರ ತಂಡಗಳಿಗೆ ವಿತರಿಸಲಾಗಿದೆ ಎಂದರು. ಒಟ್ಟು ನಾಲ್ಕು ತಂಡಗಳಿಗೆ ಸಾಂಕೇತಿಕ ಲಾಭಾಂಶ ಹಸ್ತಾಂತರಿಸಲಾಯಿತು.


ಅಧ್ಯಕ್ಷತೆಯನ್ನು ಪಾಂಡೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷೆ ಕಲ್ಪನಾ ದಿನಕರ್ ವಹಿಸಿದರು. ಮುಖ್ಯ ಅತಿಥಿಗಳಾಗಿ ಜನಜಾಗೃತಿ ವೇದಿಕೆ ಜಿಲ್ಲಾ ಸಮಿತಿದ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ, ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಅಚ್ಯತ್ ಪೂಜಾರಿ ಕಾರ್ಕಡ ಉಪಸ್ಥಿತರಿದ್ದರು. ಧ.ಗ್ರಾ.ಯೋಜನೆಯ ಯೋಜನಾಧಿಕಾರಿ ದಿನೇಶ್ ಸೇರಿಗಾರ್ ಪ್ರಾಸ್ತಾವನೆ ಸಲ್ಲಿಸಿದರು. ಸಾಸ್ತಾನ ಒಕ್ಕೂಟದ ಸೇವಾ ಪ್ರತಿನಿಧಿ ಶೋಭಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಧ.ಗ್ರಾ.ಯೋಜನೆ ಪಾಂಡೇಶ್ವರ ವಲಯ ಮೇಲ್ವಿಚಾರಕ ನಾಗೇಂದ್ರ ನಿರೂಪಿಸಿದರು. ಪಾಂಡೇಶ್ವರ ವಲಯ ಸೇವಾಪ್ರತಿನಿಧಿ ಅಕ್ಷಯ ವಂದಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!