ದಕ್ಷಿಣ ಕನ್ನಡ: ವೃದ್ಧ ದಂಪತಿಗಳು ಒಂದೇ ದಿನ ಕೋವಿಡ್ ನಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬಾ ತಾಲ್ಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಮುಂಡಜೆಯಲ್ಲಿರುವ ಸೇಂಟ್ ಮೇರಿಸ್ ಚರ್ಚ್ನ ಪ್ಯಾರಿಷ್ ಪಾದ್ರಿಯ ಪೋಷಕರು ಕೊರೋನಾಗೆ ಬಲಿಯಾಗಿದ್ದಾರೆ.
ಜೂನ್ 25ರಂದು ಇವರಿಗೆ ಜ್ವರ ಕಾಣಿಸಿಕೊಂಡಿದ್ದು ಔಷಧಿ ತೆಗೆದುಕೊಂಡ ನಂತರ ಇಬ್ಬರೂ ಗುಣಮುಖರಾಗಿದ್ದರು. ಜುಲೈ 4ರಂದು ಮತೊಮ್ಮೆ ಜ್ವರದ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ನಿನ್ನೆ ಮಧ್ಯಾಹ್ನ 3 ಗಂಟೆಗೆ ಮೇರಿ ನಿಧನರಾಗಿದ್ದು, ಆದೇ ದಿನ ಸಂಜೆ ಸಂಜೆ 6.30 ರ ಸುಮಾರಿಗೆ ಅವರ ಪತಿ ವರ್ಗೀಸ್ ಕೂಡ ಸಾವನ್ನಪ್ಪಿದರು.
Advertisement. Scroll to continue reading.

ಶುಕ್ರವಾರ ಬೆಳಿಗ್ಗೆ ನೆಲ್ಯಾಡಿಯ ಸೇಂಟ್ ಅಲ್ಫೋನ್ಸಸ್ ಚರ್ಚ್ ಸ್ಮಶಾನದಲ್ಲಿ ಕೊವಿಡ್ -19 ಮಾರ್ಗಸೂಚಿ ಪ್ರಕಾರ ಅಂತಿಮ ವಿಧಿಗಳನ್ನು ನಡೆಸಲಾಯಿತು.