ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ರಾಜ್ಯದಾದ್ಯಂತ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಆರಂಭಗೊಂಡಿದೆ. ಕೊರೋನಾ ಭೀತಿಯ ನಡುವೆ ಪರೀಕ್ಷೆ ನಡೆಯುತ್ತಿದ್ದು, ಮುಂಜಾಗೃತಾ ಕ್ರಮಗಳೊಂದಿಗೆ ಪರೀಕ್ಷೆ ಆರಂಭಗೊಂಡಿದೆ. ಬ್ರಹ್ಮಾವರದಲ್ಲೂ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಪ್ರತೀ ಕೇಂದ್ರದಲ್ಲೂ 4ಸ್ಕೌಟ್ , 1 ದೈಹಿಕ ಶಿಕ್ಷಕರು, 1 ಆರೋಗ್ಯ ,ಆಶಾ ಕಾರ್ಯಕರ್ತೆಯರು, 1 ಮೊಬೇಲ್ ಸ್ವಾಧಿನಾಧಿಕಾರಿ, 1 ಪೋಲೀಸ್ ಒಟ್ಟು 472 ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಬೆಳಿಗ್ಗೆ 8-30ಕ್ಕೆ ಉಡುಪಿಯಿಂದ ಎಸ್ಸ್ಕಾಡ್ ಬೆಂಬಲದ ಪೋಲೀಸ್ ವಾಹನದಲ್ಲಿ ಪ್ರಶ್ನೆ ಪತ್ರಿಕೆ ಯನ್ನು 7 ವಾಹನದಲ್ಲಿ 2 ಪರೀಕ್ಷ ಕೇಂದ್ರದಂತೆ 1 ಪೆರ್ಡೂರು, ಮಣಿಪಾಲ, 2 ಮೌಂಟ್ ರೊಸರಿ ,ಕೆಮ್ಮಣು, 3 ಮಿಲಾಗ್ರೀಸ್ ಬ್ರಹ್ಮಾವರ ಬೋರ್ಡ ಹೈಸ್ಕೂಲ್ ,4 ನಿರ್ಮಲ, ಎಸ್. ಎಂ. ಎಸ್ 5 ಬಾರಕೂರು, ಆವರ್ಸೆ , 6 ಮಂದಾರ್ತಿ , ಕೊಕ್ಕರ್ಣೆ 7 ಕೋಟ ವಿವೇಕ ಗರ್ಲ್ಸ್ ಮತ್ತು ಬಾಯ್ಸ್ ಶಾಲೆಗಳಿಗೆ ತಲುಪಿಸಿ 10-30ಕ್ಕೆ ಪರೀಕ್ಷೆ ಆರಂಭಗೊಂಡಿದೆ.




