Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಯುವ ವಿಚಾರ ವೇದಿಕೆ ಉಪ್ಪೂರು ವತಿಯಿಂದ ಹಡಿಲು ಭೂಮಿ ಕೃಷಿ ಕಾಯಕ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಯುವ ವಿಚಾರ ವೇದಿಕೆ ಉಪ್ಪೂರು ಇವರ ವತಿಯಿಂದ ಹಡಿಲು ಭೂಮಿ ಕೃಷಿ ಕಾರ್ಯ ಇಂದು ನೆರವೇರಿಸಲಾಯಿತು. ಭೂಮಿ ತಾಯಿಗೆ ಹಾಲು ಎರೆಯುವ ಮೂಲಕ ಕೃಷಿ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಪ್ರಸ್ತುತ ಕೃಷಿ ಕಾಯಕಕ್ಕೆ ಜನರು ಸಿಗದೆ, ಯುವ ಪೀಳಿಗೆ ಕೃಷಿ ಕಾಯಕಕ್ಕೆ ಹಿಂದೇಟು ಹಾಕುವ ಸಂದರ್ಭದಲ್ಲಿ ಕಳೆದ ವರ್ಷದಂತೆ ಈ ವರ್ಷ ಕೂಡ ಅಮ್ಮುಂಜೆ ಪರಿಸರದಲ್ಲಿ ಹಡಿಲು ಬಿದ್ದ ಗದ್ದೆ ಕೃಷಿ ಮಾಡುವ ಮೂಲಕ ಯುವ ವಿಚಾರ ವೇದಿಕೆ ಮಾದರಿಯಾಗಿದೆ.

ಈ ಸಂದರ್ಭ ಗ್ರಾಮ ಪಂಚಾಯತ್ ಸದಸ್ಯರಾದ ಅಶ್ವಿನಿ ರೋಚ್, ಸತೀಶ್ ಪೂಜಾರಿ, ಮುಂಬೈ ಉದ್ಯಮಿ ಮೈಕಲ್, ಸ್ಥಳೀಯರಾದ ಮಾರ್ಟಿಸ್, ವಿನೋದ್ ನಾಯಕ್, ಹಿರಿಯರಾದ ಮಾಧವ ಪಾಣ, ಗದ್ದೆಯ ಮಾಲೀಕರಾದ ಮಾರ್ಗರೆಟ್, ಅಪ್ಪಿ, ಸ್ಪಂದನ ವಿಶೇಷ ಚೇತನ ಶಾಲೆಯ ಜನಾರ್ದನ, ಉಮೇಶ್, ಸ್ಥಳೀಯರಾದ ರಿಚರ್ಡ್, ಮ್ಯತಿವ್ ಮಸ್ಕರೇನಸ್, ಪೀಟರ್, ಉ. ವ್ಯ.ಸೆ.ಸ.ಸಂಘದ ವ್ಯವಸ್ಥಾಪಕ ಸಂದೀಪ್ ಶೆಟ್ಟಿ, ವೇದಿಕೆಯ ಅಧ್ಯಕ್ಷ ದಿನೇಶ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ವೇದಿಕೆಯ ಯೋಗೀಶ್ ಕೊಳಲಗಿರಿ ನಿರೂಪಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!