ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮ್ತಿಯಾರ್ ಬೆಟ್ಟು ಎಂಬಲ್ಲಿನ ಪರಿಶಿಷ್ಟ ಕಾಲನಿಯ ಬಳಿ ರೋಡ್ ನಲ್ಲಿ ಮಳೆಗಾಲದ ನೀರು ತುಂಬಿ ಜನ ಸಂಚಾರಕ್ಕೆ ಬಾರಿ ತೊಂದರೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪರಿಶಿಷ್ಟರ ಕುಂದುಕೊರತೆ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡಿದ್ದು ಸಮಸ್ಯೆಯನ್ನಾಲಿಸಿದ ಬೀಜಾಡಿ ಪಂಚಾಯತ್ ಅಧಿಕಾರಿ ಮತ್ತು ಸ್ಥಳೀಯ ಜನ ಪ್ರತಿನಿಧಿ ಸ್ಥಳಕ್ಕೆ ಆಗಮಿಸಿ ಪರಿಶಿಲನೆ ನಡೆಸಿದರು.
ಈ ಸಂದರ್ಭ ಪಂಚಾಯತ್ ಅದ್ಯಕ್ಷೆ ಸುಮತಿ ನಾಗರಾಜ್, ವಾರ್ಡ ಸದಸ್ಯ ವಿಶ್ವನಾಥ, ಪಿಡಿಓ ಗಣೇಶ್, ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆಯ ಸದಸ್ಯ ಸುರೇಶ್ ಬಾಬು, ಮಂಜುನಾಥ, ರಾಜು ಬೈಲೂರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.
Advertisement. Scroll to continue reading.