ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಡಿಎನ್ ಎ ಲಸಿಕೆಯನ್ನು ಸಿದ್ಧಪಡಿಸಿದ ವಿಶ್ವದ ಮೊದಲ ದೇಶ ಭಾರತವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ ಸಂಸತ್ತಿನಲ್ಲಿ ಹೇಳಿದ್ದಾರೆ. ಇದನ್ನು ಅಹ್ಮದಾಬಾದ್ ನ ಜೈದಸ್ ಕ್ಯಾಡಿಲಾ ಸಿದ್ಧಪಡಿಸಿದ್ದಾರೆ ಮತ್ತು ಈ ಲಸಿಕೆ ಝೈಕೋವಿ-ಡಿ ಎಂದು ಕರೆಯಲ್ಪಡುತ್ತದೆ.
ವೈದ್ಯಕೀಯ ಪ್ರಯೋಗಗಳ ಮೂರನೇ ಹಂತದ ಆರಂಭಿಕ ಫಲಿತಾಂಶಗಳ ನಂತರ, ವಿಶ್ವದ ಮೊದಲ ಡಿಎನ್ ಎ ಲಸಿಕೆಗೆ ತುರ್ತು ಪರಿಸ್ಥಿತಿಯನ್ನು ಬಳಸಲು ಭಾರತದ ಔಷಧ ನಿಯಂತ್ರಕ ಜನರಲ್ ಅವರಿಂದ ಅನುಮತಿ ಪಡೆದಿರುವುದಾಗಿ ಝೈಡಸ್ ಹೇಳಿದರು. ಈ ಲಸಿಕೆಯೂ ಕೊರೊನಾ ವೈರಸ್ ವಿರುದ್ಧ ಶೇಕಡಾ 66.6 ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ.
ನ್ಯೂಯಾರ್ಕ್ ಟೈಮ್ಸ್ ವರದಿಯಲ್ಲಿ, ಲಸಿಕೆಯನ್ನೂ ಪಡೆದ ಯಾವ ಸ್ವಯಂಸೇವಕರ ಪ್ರಯೋಗದ ನಂತರ ಯಾವುದೇ ರೋಗದ ಬಗ್ಗೆ ದೂರು ನೀಡಿಲ್ಲ ಅಥವಾ ಯಾರೂ ಮೃತನಾಗಿಲ್ಲ ಎಂದು ವರದಿಮಾಡಿದೆ .

ಕೋವಿಡ್ 19 ರ ವಿರುದ್ಧ ಈ ಲಸಿಕೆಯು ಕೆಲಸ ಮಾಡಿತ್ತು. ದೇಶದ ಹಲವಾರು ಕಡೆ ಈ ಲಸಿಕೆಯ ಪ್ರಯೋಗ ನಡೆಸಲಾಗಿದ್ದು, 18 ವರ್ಷ ವಯಸ್ಸಿನವರ ಮೇಲೂ ಈ ಲಸಿಕೆ ಪಯೋಗ ನಡೆಸಿದ್ದು, ಯಾವುದೇ ಅಡ್ಡ ಪರಿಣಾಮ ಇಲ್ಲ ಹಾಗೂ ಸುರಕ್ಷಿತ ಎಂದು ಸಾಭೀತುಪಡಿಸಿದೆ.
